ಪ್ರಜಾಸ್ತ್ರ ಸಿನಿಮಾ ಡೆಸ್ಕ್
ವರುಣನ ಆರ್ಭಟದಿಂದ ಸಂಪೂರ್ಣವಾಗಿ ಕಂಗೆಟ್ಟು ಹೋಗಿರುವ ಅಸ್ಸಾಂ, ಪ್ರವಾಹದಿಂದ ಅಪಾರ ಪ್ರಮಾಣದ ಹಾನಿಯನ್ನು ಅನುಭವಿಸುತ್ತಿದೆ. ಇದೀಗ ಬಾಲಿವುಡ್ ನಟ ಆಮೀರ್ ಖಾನ್ 25 ಲಕ್ಷ ರೂಪಾಯಿ ನೆರವು ನೀಡಿದ್ದಾರೆ.
ಅಸ್ಸಾಂ ಸಿಎಂ ಪರಿಹಾರ ನಿಧಿಗೆ 25 ಲಕ್ಷ ರೂಪಾಯಿ ನೀಡಿದ್ದಾರೆ. ಆಮೀರ್ ಖಾನ್ ನೆರವಿನ ಹಸ್ತಕ್ಕೆ ಸಿಎಂ ಹಿಮಂತ್ ಬಿಸ್ವಾ ಶರ್ಮಾ ಧನ್ಯವಾದಗಳು ಎಂದಿದ್ದಾರೆ. ಪ್ರವಾಹದಿಂದಾಗಿ 24.92 ಲಕ್ಷ ಜನರು ಸಂಕಷ್ಟಕ್ಕೆ ತುತ್ತಾಗಿದ್ದಾರೆ.