ಬೆಂಗಳೂರು: ಕರೋನಾ ಲಾಕ್ ಡೌನ್ ನಿಂದಾಗಿ ಚಿತ್ರರಂಗ ಸಹ ಸಂಪೂರ್ಣ ಸ್ತಬ್ಧವಾಗಿದೆ. ಇದರ ಪರಿಣಾಮ ಸ್ಮಾಲ್ ಸ್ಕ್ರೀನ್ ನಲ್ಲಿ ಕಳೆದ 40 ದಿನಗಳಿಗೂ ಹೆಚ್ಚು ಕಾಲ ಧಾರವಾಹಿ ಸಹ ಸೇರಿ ರಿಯಾಲಿಟಿ ಶೂ ಸಹ ನಿಂತಿವೆ. ಹೀಗಾಗಿ ಹಳೆಯ ಸೀರಿಯಲ್ ಗಳನ್ನ ಮರುಪ್ರಸಾರ ಮಾಡಲಾಗ್ತಿದೆ. ಈ ಬಗ್ಗೆ ರಾಜ್ಯ ಸರ್ಕಾರ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಸಚಿವ ಆರ್.ಅಶೋಕ ಹೇಳಿದ್ದಾರೆ.
ಸೋಂಕು ಹರಡುವುದನ್ನ ತಡೆಯುವ ನಿಟ್ಟಿನಲ್ಲಿ ಶೂಟಿಂಗ್ ಗೆ ನಿರ್ಬಂಧ ಹೇರಲಾಗಿತ್ತು. ಹೀಗಾಗಿ ಯಾವುದೇ ಚಿತ್ರೀಕರಣವಾಗಿರ್ಲಿಲ್ಲ. ಈ ಬಗ್ಗೆ ಸರ್ಕಾರ ಚಿಂತನೆ ನಡೆಸಿದ್ದು, ಶೂಟಿಂಗ್ ಯಾವಾಗ ಶುರು ಮಾಡಬೇಕು ಅನ್ನೋದು ನಾಳೆ ಹೇಳುತ್ತೇವೆ ಎಂದು ಕಂದಾಯ ಸಚಿವ ಆರ್.ಅಶೋಕ ಹೇಳಿದ್ದಾರೆ.
ಸಿನ್ಮಾ, ಧಾರವಾಹಿ ನಿರ್ದೇಶಕರು, ನಿರ್ಮಾಪಕರು ಸಾಮಾಜಿಕ ಅಂತರ ಕಾಪಾಡುವ ಭರವಸೆ ನೀಡಿದ್ದಾರೆ. ಈ ಬಗ್ಗೆ ನನ್ನೊಂದಿಗೆ ಮಾತ್ನಾಡಿದ್ದಾರೆ. ನಾಳೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಶೂಟಿಂಗ್ ಗೆ ಅನುಮತಿ ನೀಡಲು ತೀರ್ಮಾನಿಸುತ್ತೇವೆ ಎಂದು ತಿಳಿಸಿದ್ದಾರೆ.