ಯಲಗೋಡದಲ್ಲಿ ಆಶಾ ಕಾರ್ಯಕರ್ತೆ ಮೇಲೆ ಹಲ್ಲೆ: ಐವರ ಮೇಲೆ ಎಫ್ಐಆರ್

1047

ದೇವರಹಿಪ್ಪರಗಿ: ವಿಜಯಪುರ ಜಿಲ್ಲೆ ದೇವರ ಹಿಪ್ಪರಗಿ ಮತಕ್ಷೇತ್ರದ ಯಲಗೋಡ ಎಲ್.ಟಿ ಗ್ರಾಮದಲ್ಲಿ ಆಶಾ ಕಾರ್ಯಕರ್ತೆ ಮೇಲೆ ಹಲ್ಲೆ ಮಾಡಿದ ಘಟನೆ ನಡೆದಿದೆ. ರೇಖಾ ಸಂತೋಷ ರಾಠೋಡ ಎಂಬುವರ ಮೇಲೆ ನಿನ್ನೆ ರಾತ್ರಿ ಹಲ್ಲೆ ಮಾಡಲಾಗಿದೆ.

ಹಲ್ಲೆಗೆ ಸಂಬಂಧಿಸಿದಂತೆ ಕಲಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು, ಇಂದು ಐವರ ಮೇಲೆ ಎಫ್ಐಆರ್ ಆಗಿದೆ. ಪ್ರಮೋದ ಗೇಮು ರಾಠೋಡ (A1), ಲಕ್ಷ್ಮಿ ಪ್ರಮೋದ ರಾಠೋಡ (A2), ರವಿ ರಾಠೋಡ(A3), ಸಂಜು ರಾಠೋಡ (A4) ಹಾಗೂ ರಾಹುಲ ರಾಠೋಡ (A5) ಎಂಬುವರ ಮೇಲೆ ಎಫ್ಐಆರ್ ಆಗಿದೆ. ಐಪಿಸಿ ಸೆಕ್ಷನ್ 353, 504,  ಅನ್ವಯ ಪ್ರಕರಣ ದಾಖಲು ಮಾಡಲಾಗಿದೆ.

ಪ್ರಕರಣ ಹಿನ್ನೆಲೆ:

ಪ್ರಮೋದ ರಾಠೋಡ ಹಾಗೂ ಪತ್ನಿ ಲಕ್ಷ್ಮಿ ದಂಪತಿ ಮುಂಬೈನಿಂದ ನಿನ್ನೆ ಸಂಜೆ ಯಲಗೋಡ ತಾಂಡಕ್ಕೆ ಬಂದಿದ್ದಾರೆ. ಹೀಗಾಗಿ ಮಾಹಿತಿ ಪಡೆಯಲು ಹೋದ ಆಶಾ ಕಾರ್ಯಕರ್ತೆ ರೇಖಾ ರಾಠೋಡ ಎಂಬುವರ ಮೇಲೆ ದಂಪತಿ ಸೇರಿ ಐವರು ಹಲ್ಲೆ ಮಾಡಿದ್ರು. ಐವರು ಆರೋಪಿಗಳನ್ನು ಬಂಧಿಸಿ ಸರ್ಕಾರದ ನಿಯಮದಂತೆ ಕ್ವಾರಂಟೈನ್ ನಲ್ಲಿ ಇರಿಸಲಾಗಿದೆ ಎಂದು ಕಲಕೇರಿ ಪೊಲೀಸ್ ಠಾಣೆಯ ಪಿಎಸ್ಐ ಆರ್.ಎಚ್.ಹಳ್ಳಿ ಮೇಡಂ ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!