ವಿಜಯಪುರ: ನಗರದ ಎಡಿಎಲ್ಆರ್ ಸರ್ವೇಯರ್ ಒಬ್ಬರು ಲಂಚ ಪಡೆಯುವಾಗ ಎಸಿಬಿ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ಪ್ರಕರಣ ವಿಜಯಪುರದಲ್ಲಿ ನಡೆದಿದೆ.
ಶಾರದಾ ನಾಯಕ ಅನ್ನೋ ಎಡಿಎಲ್ಆರ್ ಸರ್ವೇಯರ್ ಜಮೀನು ಅಳತೆ ಮಾಡಿಕೊಡುವುದರ ಸಲುವಾಗಿ 7 ಸಾವಿರ ರೂಪಾಯಿ ಲಂಚ ಪಡೆಯುವಾಗ ಎಸಿಬಿ ಬಲೆಗೆ ಸಿಕ್ಕಿ ಬಿದ್ದಿದ್ದಾರೆ. ಇದೀಗ ಅವರನ್ನ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದು ವಿಚಾರಣೆ ನಡೆಸ್ತಿದ್ದಾರೆ.