ಹುಣಸೂರು ಬಳಿ ಭೀಕರ ಅಪಘಾತ 6 ಜನರ ಸಾವು

418

ಪ್ರಜಾಸ್ತ್ರ ಸುದ್ದಿ

ಹುಣಸೂರು: ಬೊಲೆರೋ ವಾಹನ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ 6 ಜನರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಕಲ್ ಬೆಟ್ ಹತ್ತಿರ ನಡೆದಿದೆ. ಮದುವೆ ಕಾರ್ಯಕ್ರಮ ಮುಗಿಸಿಕೊಂಡು ಹೊರಟಾಗ ಈ ದುರ್ಘಟನೆ ನಡೆದಿದೆ.

ಬುಧವಾರ ಸಂಜೆ ಈ ಘಟನೆ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ. ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಪಾಲಿಬೆಟ್ಟ ಗ್ರಾಮದ ಅನಿಲ್, ಸಂತೋಷ್, ರಾಜೇಶ್, ದಯಾನಂದ್, ವಿನುತ್ ಹಾಗೂ ಬಾಬು ಮೃತ ದುರ್ದೈವಿಗಳು.




Leave a Reply

Your email address will not be published. Required fields are marked *

error: Content is protected !!