ಪ್ರಜಾಸ್ತ್ರ ಸುದ್ದಿ
ದೇವರಹಿಪ್ಪರಗಿ: ಲಾರಿ ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರನೊಬ್ಬ ಸಾವನ್ನಪ್ಪಿದ ಘಟನೆ ವಿಜಯಪುರ ಜಿಲ್ಲೆಯ ತಾಲೂಕಿನ ಪಡಗಾನೂರ ಕ್ರಾಸ್ ಇಟ್ಟಂಗಿ ಭಟ್ಟಿ ಹತ್ತಿರ ನಡೆದ ಘಟನೆ.
22 ವರ್ಷದ ಮಲ್ಲಯ್ಯ ಹಿರೇಮಠ ಮೃತ ದುರ್ದೈವಿ. ಇನ್ನು 22 ವರ್ಷದ ಮಡಿವಾಳಪ್ಪ ಗುನ್ನಾಪುರ, ಕೊಂಡಗೂಳಿ ಯುವಕ ಗಂಭೀರ ಗಾಯಗೊಂಡಿದ್ದು, ವಿಜಯಪುರ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ವಿಜಯಪುರದಿಂದ ಕೊಂಡಗುಳಿಗೆ ಬರುವಾಗ ಲಾರಿ ಹಿಂಬದಿಗೆ ಗುದ್ದಿ, ಹಿಂದಿನ ಲಾರಿ ಬೈಕ್ ಸವಾರರ ಮೇಲೆ ಹಾಯ್ದು ಹೋದ ಕಾರಣ ಒಬ್ಬ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇನ್ನೊಬ್ಬನಿಗೆ ಗಂಭೀರ ಗಾಯಗಳಾಗಿವೆ. ದೇವರಹಿಪ್ಪರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.