ದರೋಡೆಗೆ ಪ್ಲಾನ್ ಮಾಡಿದವರು ಅಂದರ್

357

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಭರ್ಜರಿಯಾಗಿ ದರೋಡೆಗೆ ಪ್ಲಾನ್ ಮಾಡಿ ರೆಡಿಯಾಗಿದ್ದ ಟೀಂ ಅನ್ನ ಪೊಲೀಸ್ರು ಬಂಧಿಸಿದ್ದಾರೆ. ಸಿಸಿಬಿ ಪೊಲೀಸ್ರು ಬೀಸಿದ ಬಲೆಗೆ ಐವರು ಸಿಕ್ಕಿಬಿದ್ದಿದ್ದಾರೆ.

22 ವರ್ಷದ ನಂದನ, 21 ವರ್ಷದ ಪ್ರೇಮಕುಮಾರ, 20 ವರ್ಷದ ಶ್ರೇಯಸ, 19 ವರ್ಷದ ನಾಗರಾಜ ಹಾಗೂ 19 ವರ್ಷದ ಕೇವಿನ ಬಂಧಿತ ಆರೋಪಿಗಳಾಗಿದ್ದಾರೆ.

ಯಲಹಂಕ ಠಾಣೆ ವ್ಯಾಪ್ತಿಯ ಅಳ್ಳಾಳಸಂದ್ರ ಬಳಿ, ಈ ಐವರ ತಂಡ ಸ್ಕೆಚ್ ಹಾಕಿ ಸಾರ್ವಜನಿಕರಿಗೆ ಬೆದರಿಸಿ ದರೋಡೆ ನಡೆಸಲು ಪ್ಲಾನ್ ಮಾಡಿತ್ತು. ಈ ಬಗ್ಗೆ ಪೊಲೀಸ್ರಿಗೆ ಮಾಹಿತಿ ಸಿಕ್ಕಿದೆ. ತಕ್ಷಣ ಫೀಲ್ಡ್ ಗೆ ಇಳಿದ ಪೊಲೀಸ್ರು ಐವರನ್ನ ಬಂಧಿಸಿ, ಅವರ ಬಳಿಯಿದ್ದ ಮಾರಕಾಸ್ತ್ರಗಳನ್ನ ವಶಕ್ಕೆ ಪಡೆದಿದ್ದಾರೆ. ಐವರ ವಿರುದ್ಧ ಕೇಸ್ ದಾಖಲಾಗಿದೆ.




Leave a Reply

Your email address will not be published. Required fields are marked *

error: Content is protected !!