ಪ್ರಜಾಸ್ತ್ರ ಸುದ್ದಿ
ನವದೆಹಲಿ: ಇಡಿ ವಿಚಾರಣೆಗೂ ಮೊದಲು ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಒಂದಾದ ಮೇಲೆ ಒಂದರಂತೆ ಸಮನ್ಸ್ ನೀಡುತ್ತಿದ್ದಾರೆ. ಮುಂದಿನವಾರ ಸಿಬಿಐ ವಿಚಾರಣೆ, ಕೋರ್ಟ್ ಕೇಸ್ ಇದೆ ಎಂದು ಹೇಳಿದರು.
ಮೂರನೇ ಬಾರಿಗೆ ಇಡಿ ಅಧಿಕಾರಿಗಳು ಸಮನ್ಸ್ ನೀಡಿದ್ದಾರೆ. ನನ್ನ ಜೊತೆ ವ್ಯವಹಾರ ಮಾಡಲು ಹೆದರುತ್ತಿದ್ದಾರೆ. ನನ್ನೊಂದಿಗೆ ವ್ಯವಹರಿಸುತ್ತಿದ್ದವರನ್ನು ವಿಚಾರಣೆ ಮಾಡಲಾಗುತ್ತಿದೆ. ಇದರಿಂದಾಗಿ ನನ್ನ ಫೋನ್ ರಿಸೀವ್ ಮಾಡಲು ಸಹ ಭಯ ಪಡುತ್ತಿದ್ದಾರೆ ಎಂದರು.