ಅಧಿಕಾರದಲ್ಲಿದ್ದ ಮುಖ್ಯಮಂತ್ರಿಗೆ ಏನೂ ಕಿಸಿದಾಗಿಲ್ಲ: ಶಾಸಕ ಯತ್ನಾಳ

221

ಪ್ರಜಾಸ್ತ್ರ ಸುದ್ದಿ

ಗೋಕಾಕ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕು ಅನ್ನೋ ವಿಚಾರ ಸಂಬಂಧ ಗೋಕಾಕಿನಲ್ಲಿ ಬೃಹತ್ ಸಮಾವೇಶ ನಡೆಸಲಾಯಿತು. ಈ ವೇಳೆ ಮಾತನಾಡಿದ ವಿಜಯಪುರ ಬಿಜೆಪಿ ಶಾಸಕ ಬಸವನಗೌಡ ಪಾಟೀಲ ಯತ್ನಾಳ, ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿ ವಿರುದ್ಧ ಗುಡುಗಿದರು.

ಅರೆ ಮಕ್ಕಳೆ ಎಂತಿಂಥವರು ಹೋಗ್ಯಾರ. ಎಂತಿಂಥವರನ್ನು ನಾನು ಮನಿಗಿ ಕಳಿಸೀನಿ. ನಿನ್ಗ ಏನಾದರೂ ತಾಕತ್ ಇದ್ರ ನನ್ನ ಕೂಡ ಡೈರೆಕ್ಟ್ ಆಗಿ ಯುದ್ಧಕ್ಕ ಬಾ. ಪಾಪ ಯಾವುದೋ ಮುಗ್ಧ ಜನಗಳನ್ನು ತಗೊಂಡು ಯತ್ನಾಳ ಜಗ್ಗತೀವಿ. ಯತ್ನಳಾಗ ಏನ್ ಕಿಸಿತೋ, ಅಧಿಕಾರದಲ್ಲಿದ್ದ ಮುಖ್ಯಮಂತ್ರಿಗೆ ಏನು ಕಿಸಿದು ಆಗಿಲ್ಲ. ನೀ ಏನು ಕಿಸ್ಯಾಂವ ಇದಿ ಎಂದು ಪರೋಕ್ಷವಾಗಿ ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿ ವಿರುದ್ಧ ಬಿಜೆಪಿ ಶಾಸಕ ಯತ್ನಾಳ ವಾಗ್ದಾಳಿ ನಡೆಸಿದರು.

ವಾಲ್ಮೀಕಿ ಸಮಾಜಕ್ಕೆ ಮೀಸಲಾತಿ ಹೆಚ್ಚು ಮಾಡಬೇಕು ಅಂತಾ ಮಾತನಾಡಿದವನು ನಾನು. ತಳವಾರ ಸಮಾಜಕ್ಕೆ ಎಸ್ಟಿ ಸರ್ಟಿಫಿಕೇಟ್ ಕೊಡಬೇಕು ಅಂತಾ ಹೋರಾಟ ಮಾಡಿದವನು ನಾನು. ಮರಾಠರಿಗೆ ನಿಗಮ ಮಂಡಳಿ ಮಾಡಬೇಕು ಎಂದು ಬೆಳಗಾವಿ ಅಧಿವೇಶನದಲ್ಲಿ ಮಾತನಾಡಿದ್ದು ನಾನು. ನಾನು ಬರೀ ಪಂಚಮಸಾಲಿಯವರ ಬಗ್ಗೆ ಮಾತನಾಡಿಲ್ಲ. ಮಡಿವಾಳರು, ಹಡಪದವರು, ಆದಿ ಬಣಜಿಗರು, ಚರ್ತರು, ಕೂಡುಒಕ್ಕಲಿಗರು, ಎಲ್ಲ ಸಮಾಜದವರ ವಿಚಾರಗಳನ್ನು ನಾನು ವಿಧಾನಸೌಧದಲ್ಲಿ ಮಾತನಾಡಿದ್ದೇನೆ. ನೀ ಎಂದು ಮಾತನಾಡೀಯಪ ಎಂದು ಪ್ರಶ್ನಿಸಿದರು. ಲಿಂಗಾಯತರು ಅದೆ 11 ರೂಪಾಯಿ ಪಟ್ಟಿ ಕೊಟ್ಟು ನಿನಗ ಮುಂದಿನ ಸಾರಿ ಬರೋಬ್ಬರಿ ಬುದ್ದಿ ಕಲಿಸ್ತಾರ ಎಂದು ತೀವ್ರ ವಾಗ್ದಾಳಿ ನಡೆಸಿದರು.




Leave a Reply

Your email address will not be published. Required fields are marked *

error: Content is protected !!