ಬೆಂಗಳೂರು: ಇಂದು ಮಧ್ಯಾಹ್ನ ಬೆಂಗಳೂರಿನ ಜನರನ್ನ ನಿಗೂಢ ಶಬ್ಧವೊಂದು ಬೆಚ್ಚಿ ಬೀಳಿಸಿದೆ. ಮಧ್ಯಾಹ್ನ ಸುಮಾರು 1.30ರ ಟೈಂನಲ್ಲಿ ಭಾರೀ ಪ್ರಮಾಣದಲ್ಲಿ ಶುಬ್ಧವೊಂದು ಕೇಳಿಸಿದೆ. ಇದ್ರಿಂದಾಗಿ ಜನರು ಭಯಭೀತರಾಗಿದ್ದಾರೆ.
ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಎಂ.ಜಿ ರಸ್ತೆ, ಸರ್ಜಾಪುರ, ಕಲ್ಯಾಣ ನಗರ, ಲಾಲ್ ಬಾಗ್, ಎಲೆಕ್ಟ್ರಾನಿಕ್ ಸಿಟಿ, ವೈಟ್ ಫಿಲ್ಡ್, ಕೋರಮಂಗಲ, ಮಾರತಹಳ್ಳಿ ಸೇರಿದಂತೆ ಎಲ್ಲೆಡೆ ನಿಗೂಢ ಶಬ್ಧವೊಂದು ಕೇಳಿಸಿದೆ. ಇದಕ್ಕೆ ಜನರ ಬೆಚ್ಚಿಬಿದ್ದಿದ್ದಾರೆ.
ಇದು ಭೂಕಂಪನವಲ್ಲ. ರಿಕ್ಟರ್ ಮಾಪನದಲ್ಲಿ ದಾಖಲಾಗಿಲ್ಲವೆಂದು ಪ್ರಕೃತಿ ವಿಕೋಪ ನಿರ್ವಹಣಾ ಮಂಡಳಿ ಅಧ್ಯಕ್ಷ ಶ್ರೀನಿವಾಸ ರೆಡ್ಡಿ ತಿಳಿಸಿದ್ದಾರೆ. ಹೀಗಾಗಿ ಈ ಬಗ್ಗೆ ಶೋಧಕಾರ್ಯ ನಡೆದಿದೆ. ನಿಗೂಢ ಸದ್ದಿನ ಬಗ್ಗೆ ಇದೀಗ ಎಲ್ಲೆಡೆ ಭಾರೀ ಚರ್ಚೆ ನಡೆದಿದೆ.