ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಭರ್ಜರಿ ಮಳೆಯಾಗ್ತಿದೆ. ಬಿರುಗಾಳಿ ಸಮೇತ ಅಬ್ಬರ ಮಳೆಯಾಗ್ತಿದ್ದು, ಬೆಂಗಳೂರಿನ ಜನರಿಗೆ ಮತ್ತೊಂದು ರೀತಿಯ ಸಂಕಷ್ಟ ಎದುರಾಗಿದೆ.
ನಗರದ ವಿಜಯನಗರ, ವಸಂತನಗರ, ಮಲ್ಲೇಶ್ವರಂ, ಶಿವಾನಂದ ಸರ್ಕಲ್, ಕಲಾಸಿಪಾಳ್ಯ, ಗಾಂಧಿ ನಗರ, ಮೆಜೆಸ್ಟಿಕ್, ದೀಪಾಂಜಲಿ ನಗರ, ಸ್ಯಾಟ್ ಲೈಟ್ ನಗರ, ಮಾರುತಿ ಮಂದಿರ, ಗುಟ್ಟಳ್ಳಿ, ಕಾರ್ಪೂರೇಷನ್ ಸೇರಿದಂತೆ ಎಲ್ಲೆಡೆ ಭರ್ಜರಿ ಮಳೆಯಾಗ್ತಿದೆ.
ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಸಾರ್ವಜನಿಕರು ಪರದಾಡ್ತಿದ್ದಾರೆ. ಭಾನುವಾರದ ಬಂದ್ ನ್ನ ಮನೆಯಲ್ಲಿ ಒಂದಿಷ್ಟು ಖುಷಿಯಾಗಿ ಕಳೆಯಬೇಕು ಅನ್ನೋ ಜನರಿಗೆ ಮಳೆ ನೀರು ಹೈರಾಣು ಮಾಡಿದೆ. ಇನ್ನು ನಗರದ ಕೆಲವು ಕಡೆ ಮರಗಳು ಉರುಳು ಬಿದ್ದ ವರದಿಯಾಗಿವೆ.