ಪ್ರಜಾಸ್ತ್ರ ಇಂಪ್ಯಾಕ್ಟ್: ಹೊನ್ನಳ್ಳಿಗೆ ಅಬಕಾರಿ ಅಧಿಕಾರಿಗಳು ಭೇಟಿ

372

ಪ್ರಜಾಸ್ತ್ರ ಸುದ್ದಿ

ಸಿಂದಗಿ: ತಾಲೂಕಿನ ಹೊನ್ನಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ಮನೆ, ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡ್ತಿರುವ ಬಗ್ಗೆ, ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ರು. ಈ ಸಂಬಂಧ ಪ್ರಜಾಸ್ತ್ರ ಮಧ್ಯಾಹ್ನ ವರದಿ ಮಾಡಿತ್ತು. ಇದ್ರಿಂದ ಎಚ್ಚೆತ್ತುಕೊಂಡು ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿದ್ರು.

ಅಬಕಾರಿ ಇಲಾಖೆಯ ಉಪ ನಿರೀಕ್ಷಕರಾದ ವಿಜಯಕುಮಾರ ಹಿರೇಮಠ, ಮಹೇಶ ಪುಠಾಣಿ ಅವರು ಸ್ಥಳಕ್ಕೆ ಭೇಟಿ ನೀಡಿ, ಅಕ್ರಮವಾಗಿ ಮದ್ಯ ಮಾರಾಟ ಮಾಡ್ತಿರುವವರಿಗೆ ಎಚ್ಚರಿಕೆ ನೀಡಿದ್ರು. ಈ ವೇಳೆ ಗ್ರಾಮಸ್ಥರು ಹಾಗೂ ಅಧಿಕಾರಿಗಳ ನಡುವೆ ಒಂದಿಷ್ಟು ಮಾತಿನ ಚಕಮಕಿ ನಡೆಯಿತು. ಇನ್ನು ಊರಿನಲ್ಲಿ ಯಾರೆಲ್ಲ ಅಕ್ರಮವಾಗಿ ಮದ್ಯ ಮಾರಾಟ ಮಾಡ್ತಿದ್ದಾರೆ ಅವರೆಲ್ಲರನ್ನ ಅಧಿಕಾರಿಗಳು ವಶಕ್ಕೆ ಪಡೆಯಬೇಕು. ಒಬ್ಬಿಬ್ಬರ ವಾರ್ನ್ ಮಾಡಿದ್ರೆ ಸಾಲದು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

 ಇನ್ನು ಅಕ್ರಮ ಮದ್ಯ ಮಾರಾಟದ ವಿರುದ್ಧ ಪ್ರತಿಭಟನೆ ಮಾಡ್ತಿರುವ ಯುವಕರಿಗೆ, ಗ್ರಾಮದ ಕೆಲವರು ಬೆದರಿಕೆ ಹಾಕ್ತಿದ್ದಾರೆ ಎಂದು ಹೇಳಲಾಗ್ತಿದೆ. ಸೋಷಿಯಲ್ ಮೀಡಿಯಾ ಸೇರಿದಂತೆ ಪ್ರತಿಭಟನೆ ನಡೆಸಿವುದನ್ನ ನಿಲ್ಲಿಸಿ. ಇದೆಲ್ಲ, ನಿಮಗ್ಯಾಕೆ ಎಂದು ಅವಾಜ್ ಹಾಕ್ತಿದ್ದಾರೆ ಎಂದು ಕೆಲ ಯುವಕರು ಆರೋಪಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!