ಪ್ರಜಾಸ್ತ್ರ ಸಿನಿಮಾ ಡೆಸ್ಕ್
ನಟ ರಿಯಲ್ ಸ್ಟಾರ್ ಉಪೇಂದ್ರ ಕನ್ನಡ ಚಿತ್ರರಂಗದ ಕಾರ್ಮಿಕರಿಗೆ ಸಹಾಯ ಮಾಡಲು ಮುಂದೆ ಬಂದಿದ್ದಾರೆ. ಸಿನಿಮಾ ರಂಗದ ಸುಮಾರು 3 ಸಾವಿರ ಕುಟುಂಬಗಳಿಗೆ ದಿನಸಿ ಕಿಟ್ ನೀಡಲು ನಟ ಸಿದ್ಧರಾಗಿದ್ದು, ಇತರೆ ನಟರಂತೆ ಉಪ್ಪಿ ಸಹ ಒಂದಿಷ್ಟು ಸಹಾಯ ಮಾಡ್ತಿದ್ದಾರೆ.
ಚಿತ್ರರಂಗದಲ್ಲಿನ ವಿವಿಧ ವಿಭಾಗದ ಸಂಘಟನೆಗಳ ಮುಖ್ಯಸ್ಥರನ್ನ ಸಂರ್ಪಕಿಸುವ ಮೂಲಕ ದಿನಸಿ ಕಿಟ್ ಪಡೆದುಕೊಳ್ಳಬಹುದು ಎಂದು ನಟ ಉಪೇಂದ್ರ ಹೇಳಿದ್ದು, ನನ್ನಿಂದ ಒಂದಿಷ್ಟು ಸಹಾಯ ಮಾಡಲು ಶಕ್ತಿ ನೀಡಿದ ಅಭಿಮಾನಿಗಳಿಗೆ ಧನ್ಯವಾದಗಳು ಎಂದಿದ್ದಾರೆ.