ಪ್ರಜಾಸ್ತ್ರ ಸಿನಿಮಾ ಡೆಸ್ಕ್
ನಟ ರಿಯಲ್ ಸ್ಟಾರ್ ಉಪೇಂದ್ರ ಕರೋನಾ ಸಂದರ್ಭದ ಲಾಕ್ ಡೌನ್ ನಲ್ಲಿ ಜನರಿಗೆ ಒಂದಿಷ್ಟು ನೆರವಾಗುವ ಮೂಲಕ ರಿಯಲ್ ಲೈಫ್ ನಲ್ಲೂ ಹೀರೋ ಆಗ್ತಿದ್ದಾರೆ. ಸಿನಿ ಕಾರ್ಮಿಕರಿಗೆ ಫುಡ್ ಕಿಟ್ ನೀಡಿದ್ದ ಉಪೇಂದ್ರ ಇದೀಗ ಸಾರ್ವಜನಿಕರ ನೆರವಿಗೂ ನಿಂತಿದ್ದಾರೆ.
ರೈತರಿಂದ ನೇರವಾಗಿ ಖರೀದಿ ಮಾಡಿದ ಟೊಮೇಟೋ ಬೆಳೆಯನ್ನ ಜನರಿಗೆ ಉಚಿತವಾಗಿ ಹಂಚಿಕೆ ಮಾಡ್ತಿದ್ದಾರೆ. ಇನ್ನು ಬೆಳೆ ಬೆಳೆದು ಸಂಕಷ್ಟದಲ್ಲಿರುವ ರೈತರ ಗಮನಕ್ಕೆ ಎಂದು ಟ್ವೀಟ್ ಮಾಡಿರುವ ಅವರು, ಅವರ ಬೆಳೆಗಳನ್ನ ಖರೀದಿಸಿ ಜನರಿಗೆ ಉಚಿತವಾಗಿ ಹಂಚುವ ಕೆಲಸ ಮಾಡುತ್ತೇವೆ ಎಂದಿದ್ದಾರೆ.
ರೈತರು ತಮ್ಮ ಬಳಿಯಿರುವ ಬೆಳೆಯನ್ನ ಮಾರಲು 9845763396ಗೆ ಸಂಪರ್ಕಿಸಿ ಎಂದು ಹೇಳಿದ್ದಾರೆ.