ಹುಬ್ಬಳ್ಳಿ: ಎಐಸಿಸಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯರನ್ನಾಗಿ ವಿದ್ಯಾ ಹಿರೇಮಠ ಅವರನ್ನ ಆಯ್ಕೆ ಮಾಡಲಾಗಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ ಆದೇಶ ಹೊರಡಿಸಿದ್ದಾರೆ.
ರಾಷ್ಟ್ರೀಯ ಯುವ ಕಾಂಗ್ರೆಸ್ ನಿಂದ ಲೋಕಸಭಾ ಚುನಾವಣೆಯಲ್ಲಿ ಸಲ್ಲಿಸಿದ ಉತ್ಕ್ರಷ್ಟ ಸೇವೆಗಾಗಿ ಪ್ರಶಂಸನಾ ಪತ್ರ ಪಡೆದ ವಿದ್ಯಾ ಹಿರೇಮಠ ಅವರನ್ನ, ರಾಷ್ಟ್ರೀಯ ಅಸಂಘಟಿತ ಕಾರ್ಮಿಕ ಕಾಂಗ್ರೆಸ್ ಸಮಿತಿಯ ಕಾರ್ಯಕಾರಿ ಸಮಿತಿ ಸದಸ್ಯರನಾಗಿ ನೇಮಕ ಮಾಡಲಾಗಿದೆ.
ವಿದ್ಯಾ ಹಿರೇಮಠ, ಕುಂದಗೋಳ ವಿಧಾನಸಭಾ ಉಪಚುನಾವಣೆಯ ವೀಕ್ಷಕರಾಗಿ, ರಾಮದುರ್ಗ ವಿಧಾನಸಭಾ ಕ್ಷೇತ್ರಕ್ಕೆ ಲೋಕಸಭಾ ಚುನಾವಣೆಯಲ್ಲಿ ವೀಕ್ಷಕರಾಗಿ, ಚಾಮರಾಜನಗರ, ಮೈಸೂರು ಬಳ್ಳಾರಿಯ ಲೋಕಸಭಾ ಉಪಚುನಾವಣೆಯ ವೀಕ್ಷಕರಾಗಿ ಕಾರ್ಯ ಸಲ್ಲಿಸಿದ್ದಾರೆ. ಇವರ ಕಾರ್ಯಕ್ಕೆ ಮೆಚ್ಚಿ ರಾಷ್ಟ್ರೀಯ ಮಟ್ಟದಲ್ಲಿ ಸ್ಥಾನ ನೀಡಲಾಗಿದೆ. ವಿದ್ಯಾ ಹಿರೇಮಠ ಮಿಸ್ ಬೆಂಗಳೂರು ಚಾರ್ಮಿಂಗ್ 2019 ವಿಜೇತರು ಮತ್ತು ಎಸ್ ಡಬ್ಲ್ಯೂ ಇಂಟರ್ನ್ಯಾಷನಲ್ ಅವಾರ್ಡ್ಸ್ 2019 ವಿನ್ನರ್ ಆಗಿದ್ದಾರೆ.