ಪ್ರಜಾಸ್ತ್ರ ಸುದ್ದಿ
ಚಂಡೀಗಢ: ಪಂಜಾಬ್ ನೂತನ ಸಿಎಂ ಆಗಿ ಅಧಿಕಾರ ವಹಿಸಿಕೊಂಡಿರುವ ಭಗವಂತ್ ಮಾನ್, ರಾಜ್ಯದಲ್ಲಿ ಭ್ರಷ್ಟಾಚಾರ ವಿರೋಧಿ ಸಹಾಯವಾಣಿ ಸ್ಥಾಪಿಸಲಾಗುವುದು ಎಂದಿದ್ದಾರೆ. ಭಗತ್ ಸಿಂಗ್ ಹುತಾತ್ಮರಾದ ಮಾರ್ಚ್ 23ರಂದು ಸಹಾಯವಾಣಿ ಸ್ಥಾಪಿಸಲಾಗುವುದು ಅಂತಾ ತಿಳಿಸಿದ್ದಾರೆ.
ಯಾರಾದರೂ ಲಂಚ ಕೇಳಿದರೆ ಆಡಿಯೋ, ವಿಡಿಯೋ ಮಾಡಿ ನನಗೆ ಕಳುಹಿಸಿ. ಭ್ರಷ್ಟಾಚಾರ ಇನ್ನು ಕೆಲಸ ಮಾಡುವುದಿಲ್ಲ. ರಾಜ್ಯದಲ್ಲಿ ಶೇಕಡ 99ರಷ್ಟು ಪ್ರಾಮಾಣಿಕರಿದ್ದಾರೆ. ಶೇಕಡ 1ರಷ್ಟು ಇರುವ ಜನರು ವ್ಯವಸ್ಥೆ ಹಾಳು ಮಾಡುತ್ತಿದ್ದಾರೆ. ಭ್ರಷ್ಟರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.