ಸಿಂದಗಿಯಲ್ಲಿ ಕರೋನಾ ವಾರಿಯರ್ಸ್ ಮೇಲೆ ಹಲ್ಲೆಗೆ ಯತ್ನ

599

ಸಿಂದಗಿ: ಕರೋನಾ ಕುರಿತು ಸರ್ವೇ ಮಾಡಲು ಬಂದಿದ್ದ ಆಶಾ ಕಾರ್ತಕರ್ತೆ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಹಚ್ಯಾಳ ಗ್ರಾಮದಲ್ಲಿ ನಡೆದಿದೆ.

ಆಶಾ ಕಾರ್ಯಕರ್ತೆ ಸಾವಿತ್ರಿ ಬಡಿಗೇರ ಅವರನ್ನ ಹಿಡಿದು ಎಳೆದಾಡಲಾಗಿದೆ. ಅಲ್ದೇ, ಅವರ ಬಳಿಯಿದ್ದ ಸರ್ವೇ ಪುಸ್ತಕ ಕಿತ್ತುಕೊಳ್ಳಲಾಗಿದೆ. ಪದೆಪದೆ ಯಾಕೆ ನಮ್ಮ ಏರಿಯಾಗೆ ಬರ್ತಿರಾ ಅನ್ನೋ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದೆ. ಆಗ ಓರ್ವ ಮಹಿಳೆ ಅವರನ್ನ ಎಳೆದಾಡಿದ್ದಾರೆ.

ಕರೋನಾ ವಾರಿಯರ್ಸ್ ಮೇಲೆ ಹಲ್ಲೆ ಮಾಡುವುದಾಗ್ಲಿ, ಅವರಿಗೆ ತೊಂದ್ರೆ ಕೊಡುವುದಾಗ್ಲಿ ಮಾಡಿದ್ರೆ ಕಠಿಣ ಶಿಕ್ಷೆ ನೀಡುವ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರ ಈಗಾಗ್ಲೇ ಸುಗ್ರೀವಾಜ್ಞೆ ಹೊರಡಿಸಿದೆ. ಇದರ ನಡುವೆಯೂ ಸಿಂದಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.




Leave a Reply

Your email address will not be published. Required fields are marked *

error: Content is protected !!