ಈ ಬಾರಿ ಸರಳ ಸ್ವಾತಂತ್ರ್ಯೋತ್ಸವ: ಸಂಜೀವಕುಮಾರ ದಾಸರ

355

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಎಲ್ಲೆಡೆ ಕರೋನಾ ರಣಕೇಕೆ ಹಾಕ್ತಿರುವ ಕಾರಣಕ್ಕೆ, ಈ ಬಾರಿ ಸರಳ ಸ್ವಾತಂತ್ರ್ಯೋತ್ಸವ ಆಚರಣೆಗೆ ಸಿದ್ಧತೆ ನಡೆಸಲಾಗಿದೆ. ಈ ಸಂಬಂಧ ತಾಲೂಕು ಆಡಳಿತ ಕಚೇರಿಯಲ್ಲಿ ತಹಶೀಲ್ದಾರ್ ಸಂಜೀವಕುಮಾರ ದಾಸರ ಅವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ, ಕರೋನಾ ಮಾರ್ಗಸೂಚಿ ಅನ್ವಯ ಆಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆ ಆಚರಿಸಲು ನಿರ್ಧರಿಸಲಾಗಿದೆ.

ಈ ಬಾರಿ ಸಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಪಥ ಸಂಚಲನ ಇರುವುದಿಲ್ಲ. ಸಾಮಾಜಿಕ ಅಂತರ, ಸ್ಯಾನ್ ಟೈಸರ್ ಬಳಕೆ ಹಾಗೂ ಮಾಸ್ಕ್ ಕಡ್ಡಾಯ. ತಾಲೂಕು ವ್ಯಾಪ್ತಿಯ ಕರೋನಾ ವಾರಿಯರ್ಸ್ ಗಳಿಗೆ ಗೌರವ ಸನ್ಮಾನ. ಹೀಗಾಗಿ ಪ್ರತಿ ಇಲಾಖೆಯಿಂದ ಐವರನ್ನ ಆಯ್ಕೆ ಮಾಡಲಾಗ್ತಿದೆ. ಸರ್ಕಾರಿ ನಿಯಮದ ಪ್ರಕಾರ ಆಮಂತ್ರಣ ಪತ್ರಿಕೆ ಸಿದ್ಧಪಡಿಸಲಾಗುವುದು.

ಇನ್ನು ಆಗಸ್ಟ್ 31ರ ತನಕ ಶಾಲಾ ಕಾಲೇಜುಗಳು ಬಂದ್ ಇರುವುದ್ರಿಂದ ವಿದ್ಯಾರ್ಥಿಗಳ ಭಾಗವಹಿಸುವಿಕೆ ಕಷ್ಟಸಾಧ್ಯವಾಗಿದ್ದು, ಕಾರ್ಯಕ್ರಮದಲ್ಲಿ ಭಾಗವಹಿಸುವವರ ಸಲುವಾಗಿ ಸಾಮಾಜಿಕ ಅಂತರ ಕಾಯ್ದುಕೊಂಡು ಆಶನಗಳ ವ್ಯವಸ್ಥೆ ಮಾಡಲಾಗುವುದು ಎಂದು ಸಭೆಯಲ್ಲಿ ನಿರ್ಧರಿಸಲಾಗಿದೆ. ಈ ವೇಳೆ ಸಿಪಿಐ ಸತೀಶ ಕಾಂಬಳೆ, ಶಿರಸ್ತೇದಾರ್ ಸುರೇಶ ಮ್ಯಾಗೇರಿ, ಪುರಸಭೆ ಮುಖ್ಯಾಧಿಕಾರಿ ಸುರೇಶ ನಾಯಕ, ತಾಲೂಕು ಶಿಕ್ಷಣಾಧಿಕಾರಿ ಹೆಚ್.ಎಸ್ ನಾಗನೂರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ರು.




Leave a Reply

Your email address will not be published. Required fields are marked *

error: Content is protected !!