ತುಂಬಿದ ಕೃಷ್ಣೆ: ಝಂಜರವಾಡ-ಜಮಖಂಡಿ ರಸ್ತೆ ಜಲಾವೃತ

407

ಪ್ರಜಾಸ್ತ್ರ ಸುದ್ದಿ

ಜಮಖಂಡಿ: ಕೃಷ್ಣಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾದ್ದರಿಂದ, ಅಥಣಿ ತಾಲೂಕಿನ ಝುಂಜರವಾಡ ಹಾಗೂ ಜಮಖಂಡಿಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣವಾಗಿ ಜಲಾವೃತವಾಗಿದೆ.

ನದಿಯ ಹಿನ್ನೀರಿನಿಂದ ಝುಂಜರವಾಡ-ತುಬಚಿ ರಸ್ತೆ ಮೇಲೆ ನೀರು ಹರಿಯುತ್ತಿದ್ದು, ಅವಳಿ ತಾಲೂಕಿನ ಸಂಪರ್ಕ ಕಡಿತಗೊಂಡಿದ್ದರಿಂದ ಜನರು ಪರದಾಡುವಂತಾಗಿದೆ. ತುಬಚಿ-ಝುಂಜರವಾಡ ಗ್ರಾಮಗಳಿಗೆ ತೆರಳು ಇದೀಗ 1 ಕಿಲೋ ಮೀಟರ್ ಬದಲಿಗೆ 10 ಕಿಲೋ ಮೀಟರ್ ಸುತ್ತಿಕೊಂಡು ಬರುವ ಅನಿವಾರ್ಯ ಎದುರಾಗಿದೆ.

ಅಥಣಿ-ಝುಂಜರವಾಡ ಮಾರ್ಗವಾಗಿ ಬಾಗಲಕೋಟೆ-ಜಮಖಂಡಿ ಸಂಪರ್ಕಕ್ಕೆ 15 ಕಿಲೋ ಮೀಟರ್ ಬದಲು ಈಗ 40 ಕಿಲೋ ಮೀಟರ್‌ ಪ್ರಯಾಣಿಸಬೇಕು. ಸಾವಳಗಿ ಮಾರ್ಗವಾಗಿ ಜಮಖಂಡಿಗೆ ಹೋಗಬೇಕಾಗಿದೆ ಪರಿಸ್ಥಿತಿ ನಿರ್ಮಾಣಾಗಿದ್ದು, ಇಲ್ಲಿನ ಜನರಿಗೆ ಮತ್ತೆ ಪ್ರವಾಹದ ಭೀತಿ ಶುರುವಾಗಿದೆ.




Leave a Reply

Your email address will not be published. Required fields are marked *

error: Content is protected !!