ಮೇಡಾಮ್ ಟುಸ್ಸಾಡ್ ನಲ್ಲಿ ಹಾಲಿವುಡ್, ಬಾಲಿವುಡ್, ಟಾಲಿವುಡ್, ಕಾಲಿವುಟ್, ಮಾಲಿವುಡ್ ನಟ, ನಟಿಯರ ಮೇಣದ ಪ್ರತಿಮೆಗಳನ್ನ ಅನಾವರಣ ಮಾಡಲಾಗುತ್ತೆ. ಅದೇ ರೀತಿ ಇದೀಗ ತೆಲುಗು ನಟಿ ಕಾಜಲ್ ಅಗರ್ವಾಲ್ ಮೇಣದ ಪ್ರತಿಮೆ ಅನಾವರಣಗೊಂಡಿದೆ. ಇದಕ್ಕೆ ನಟಿ ಹರಿಪ್ರಿಯಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಬರೆದಿರುವ ನಟಿ ಹರಿಪ್ರಿಯಾ, ಕನ್ನಡದ ಕಲಾವಿದರನ್ನ ನಿರ್ಲಕ್ಷ್ಯ ಮಾಡುವುದ್ಯಾಕೆ ಎಂದು ಪ್ರಶ್ನಿಸಿದ್ದಾರೆ. ಡಾ.ರಾಜಕುಮಾರ, ಡಾ.ವಿಷ್ಣುವರ್ಧನ, ಅಂಬರೀಶ ಸರ್, ಶಂಕರನಾಗ್ ಸರ್, ಪಂಡರೀಬಾಯಿ ಮೇಡಂ, ಜಯಂತಿ ಮೇಡಂ, ಬಿ.ಸರೋಜಾದೇವಿ ಮೇಡಂ, ಕಲ್ಪನಾ ಮೇಡಂ, ಮಂಜುಳಾ ಮೇಡಂ ಹೀಗೆ ಅನೇಕ ಸಾಧಕರ ಪಟ್ಟಿಯಿದೆ. ಯುವ ಕಲಾವಿದರಗಿಂತಲೂ ಈ ಹಿರಿಯ ಕಲಾವಿದರಿಗೆ ಗೌರವ ಸಲ್ಲಬೇಕಲ್ಲವೇ ಅಂತಾ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಹಲವರು ಬೆಂಬಲ ವ್ಯಕ್ತಪಡಿಸಿದ್ದಾರೆ.
ಗಣರಾಜ್ಯೋತ್ಸವದ ವೇಳೆ ನಟಿ ಕಂಗನಾ ರಣಾವತ್ ಗೆ ಪದ್ಮಶ್ರೀ ನೀಡಿದಾಗ್ಲೂ ಕರ್ನಾಟಕದಲ್ಲಿ ಈ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ. ಗಾಂಧಿ ನಗರದ ಮಂದಿ ಸೈಲೆಂಟ್ ಆಗಿರುವುದೇ ಇದಕ್ಕೆಲ್ಲ ಕಾರಣ ಎನ್ನಲಾಗ್ತಿದೆ.