ಬದಲಾಗು ನೀನು ಸಾಂಗ್.. ಕಿಚ್ಚ ಮಿಸ್ಸಿಂಗ್.. ಸಚಿವರು ಹೇಳಿದ್ದೇನು?

383

ಕರೋನಾ ಜಾಗೃತಿ ಕುರಿತು ರಾಜ್ಯ ಸರ್ಕಾರ ಮತ್ತೊಂದು ಸಾಂಗ್ ರಿಲೀಸ್ ಮಾಡಿದೆ. ಬದಲಾಗು ನೀನು ಅನ್ನೋ ಟೈಟಲ್ ಸಾಂಗ್, ಶುಕ್ರವಾರ ಸಂಜೆ ರಿಲೀಸ್ ಆಗಿದೆ. ಸ್ಯಾಂಡಲ್ ವುಡ್ ಅಂಗಳದ ಬಹುತೇಕ ಸ್ಟಾರ್ ನಟ, ನಟಿಯರು, ಕ್ರೀಡಾ ತಾರೆಯರು ಇದ್ದಾರೆ. ಆದ್ರೆ, ಕಿಚ್ಚ ಸುದ್ದೀಪ ಮಿಸ್ ಆಗಿದ್ದಾರೆ.

ಬದಲಾಗು ನೀನು ಸಾಂಗ್ ಪೋಸ್ಟರ್ ರಿಲೀಸ್ ಆದ ಟೈಂನಲ್ಲಿಯೇ ಈ ಬಗ್ಗೆ ಭರ್ಜರಿ ಚರ್ಚೆಗಳು ನಡೆದಿದ್ವು. ಅವರ ಫ್ಯಾನ್ಸ್ ಆಕ್ರೋಶ ವ್ಯಕ್ತಪಡಿಸಿದ್ರು. ಈ ಬಗ್ಗೆ ಮಾತ್ನಾಡಿರುವ ವೈದ್ಯಕೀಯ ಶಿಕ್ಷಿಣ ಸಚಿವ ಡಾ.ಕೆ ಸುಧಾಕರ ಅವರು, ಎಲ್ಲ ಕಲಾವಿದರನ್ನ ನಾನೇ ಸಂಪರ್ಕಿಸಿದ್ದೇನೆ. ಸುದೀಪ ಅವರಿಗೂ ಟ್ರೈ ಮಾಡಿದೆ. ಅವರು ಸಂಪರ್ಕಕ್ಕೆ ಸಿಗಲಿಲ್ಲ. ಅವರ ಮ್ಯಾನೇಜರ್ ಅವರಿಗೂ ತಿಳಿಸಿದ್ದೇವೆ. ಆದ್ರೆ, ಅವರ್ಯಾಕೆ ಒಪ್ಪಲಿಲ್ಲ ಅನ್ನೋದು ಗೊತ್ತಿಲ್ಲ ಎಂದಿದ್ದಾರೆ.

ನಿರ್ದೇಶಕ ಪವನ ಒಡೆಯರ ಆ್ಯಂಡ್ ಟೀಂ ಈ ಹಾಡನ್ನ ರೆಡಿ ಮಾಡಿದೆ. ಚಂದನವನದ ಸಿನಿ ಸ್ಟಾರ್ಸ್, ಸ್ಪೋರ್ಟ್ಸ್ ಸ್ಟಾರ್ಸ್ ಇದ್ದಾರೆ. ಇನ್ನು ಹಾಡಿನ ಬಗ್ಗೆ ಕೆಲ ವಿರೋಧ ವ್ಯಕ್ತವಾಗ್ತಿವೆ. ಜಾಗೃತಿ ಮೂಡಿಸುವ ಹಾಡಿನಲ್ಲೂ ಬಿಲ್ಡಪ್ ಕೊಡಲಾಗಿದೆ ಅನ್ನೋ ಮಾತುಗಳು ಕೇಳಿ ಬರ್ತಿವೆ. ನಮ್ಮ ನಟರು ಇದ್ಯಾಕೆ ಹೀಗೆ ಮಾಡ್ತಾರೆ ಅನ್ನೋ ಪ್ರಶ್ನೆಳನ್ನ ಸೋಷಿಯಲ್ ಮೀಡಿಯಾದಲ್ಲಿ ಕೇಳ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!