ಸಿಂದಗಿ: ಜಮೈತ್ ಉಲ್ಮಾ ಐ ಹಿಂದ್ ವಿಜಯಪುರ ಜಿಲ್ಲೆಯ ಸಂಘಟನೆಯ ಸಿಂದಗಿ ಘಟಕದ ವತಿಯಿಂದ ಬಾಗಲಕೋಟೆ ಜಿಲ್ಲೆಯ ನಿರಾಶ್ರಿತ ಕೇಂದ್ರಗಳಿಗೆ ಅಗತ್ಯ ನೆರವು ನೀಡಲಾಯ್ತು. ಮುಧೋಳ, ರಬಕವಿ, ಬನಹಟ್ಟಿ ಕೇಂದ್ರಗಳಿಗೆ ಅಗತ್ಯ ವಸ್ತುಗಳನ್ನ ಹೊತ್ತ ಮೂರು ವಾಹನಗಳು ಇಂದು ಹೊರಟವು.
ದಿನಸಿ ವಸ್ತುಗಳು, ಕಿರಾಣಿ ಸಾಮಾನಿಗಳು, ಬಿಸ್ಕಿತ್, ಚಾಕ್ ಲೇಟ್ಸ್, ನೀರಿನ ಬಾಟಲ್ ಗಳು, ಮೆಡಿಸಿನ್ಸ್, ಚಪ್ಪಲ್ ಗಳು, ಹೊದಿಕೆ, ಚಾಪೆ, ಸೊಳ್ಳೆ ಬತ್ತಿ, ಟೂತ್ ಪೇಸ್ಟ್ ಸೇರಿದಂತೆ ಹಲವು ಸಾಮಗ್ರಿಗಳನ್ನ ಸ್ಥಳೀಯರಿಂದ ಸಂಗ್ರಹಿಸಿ ನಿರಾಶ್ರಿತರ ಕೇಂದ್ರಗಳಿಗೆ ಕಳುಹಿಸಿ ಕೊಡಲಾಯ್ತು. ಗುರುವಾರ ಒಂದು ವಾಹನ ಹೋಗಿದ್ದು, ಇಂದು ಮೂರು ವಾಹನಗಳಲ್ಲಿ ಅಗತ್ಯ ವಸ್ತುಗಳನ್ನ ಕಳುಹಿಸಿ ಕೊಡಲಾಯ್ತು.
ಸಂಘದ ಅಧ್ಯಕ್ಷರಾದ ಮೌಲಾನಾ ಮಹ್ಮದ ಅಲಿ, ಉಪಾಧ್ಯಕ್ಷರಾದ ಮೌಲಾನಾ ಅಸ್ಪಾಕ ಕರ್ಜಗಿ, ಹಫೀಜ ಸುಲೇಮಾನ, ಕಾರ್ಯದರ್ಶಿಯಾದ ಹಫೀಜ ಇಬ್ರಾಹಿಂ, ಅಬ್ದುಲ ರಜಾಕ ಮುಜಾವರ, ಹಾಸಿಂ ಆಳಂದ, ಹುಸೇನ ನಾಗಠಾಣ, ಬಸೀರ ಮರ್ತೂರ, ಗುಲಾಬ ಮರ್ತೂರ, ಸೈಫನ್ ನಾಟೀಕಾರ, ಇರ್ಮಾನ, ಇರ್ಫಾನ ತಲಕಾರಿ, ಮಹ್ಮದ ಅಳ್ಳೂಳಿ ಸೇರಿದಂತೆ ಸದಸ್ಯರೆಲ್ಲ ಸೇರಿ ಪ್ರಾರ್ಥನೆ ಮಾಡುವ ಮೂಲಕ ಶುಭ ಕಾರ್ಯಕ್ಕೆ ಒಳ್ಳೆಯದಾಗ್ಲಿ ಎಂದು ಕೇಳಿಕೊಂಡ್ರು.