ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಬೆಂಗಳೂರು: ನಿರ್ದೇಶಕ ಜಯತೀರ್ಥ ಅವರು ಆ್ಯಕ್ಷನ್ ಕಟ್ ಹೇಳ್ತಿರುವ ಬೆಲ್ ಬಾಟಂ-2 ಚಿತ್ರದ ಮುಹೂರ್ತ ಬುಧವಾರ ನಡೆಯಿತು. ನಗರದ ಬನಶಂಕರಿಯ ಶ್ರೀಧರ್ಮಗಿರಿ ಮಂಜುನಾಥಸ್ವಾಮಿ ದೇವಾಲಯದಲ್ಲಿ ಮುಹೂರ್ತ ನೆರವೇರಿತು.
ಪವರ್ ಸ್ಟಾರ್ ಪುನೀತರಾಜಕುಮಾರ ಅವರು ಶೂಟಿಂಗ್ ಗೆ ಚಾಲನೆ ನೀಡಿದ್ರು. ನಟ ರಿಷಬ್ ಶೆಟ್ಟಿ, ನಟಿಯರಾದ ಹರಿಪ್ರಿಯಾ, ತಾನ್ಯ ಹೋಪ್, ನಿರ್ಮಾಪಕ ಸಂತೋಷಕುಮಾರ ಕೆ.ಸಿ ಸೇರಿದಂತೆ ಇತರರು ಭಾಗವಹಿಸಿದ್ರು. ಚಿತ್ರಕ್ಕೆ ದಿ ಸೀರಿಯಸ್ ಕೇಸ್ ಆಫ್ ಚೆಂಡುಹೂವ ಅನ್ನೋ ಟ್ಯಾಗ್ ಇಡಲಾಗಿದ್ದು, ಮತ್ತಷ್ಟು ಕುತೂಹಲ ಮೂಡಿಸಿದೆ.