ತಾಳ್ಮೆ ಇಟ್ಕೊಳ್ಳಿ ನಾನೇ ಹೇಳ್ತೀನಿ: ನಟ ಯಶ್

357

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಸ್ಯಾಂಡಲ್ ವುಡ್ ರಾಕಿಂಗ್ ಸ್ಟಾರ್ ಯಶ್ ಸಿನಿ ಕರಿಯರ್ ಸಂಪೂರ್ಣ ಬದಲು ಮಾಡಿದ್ದು ಕೆಜಿಎಫ್ ಸಿನಿಮಾ. ಅಲ್ಲಿಂದ ಅವರು ನ್ಯಾಷನಲ್ ಸ್ಟಾರ್ ಆದರು. ಕೆಜಿಎಫ್ ಚಾಪ್ಟರ್-2 ಸಿನಿಮಾ ರಿಲೀಸ್ ಆಗಿ 2 ವರ್ಷ ಕಳೆದಿದೆ. ಹೊಸ ಸಿನಿಮಾ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಹೀಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.

ಲಂಡನ್ ನಲ್ಲಿ ಬೀಡು ಬಿಟ್ಟಿರುವ ಯಶ್ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹಾಲಿವುಡ್ ರೇಂಜ್ ಸಿನಿಮಾ, ಬಾಲಿವುಡ್ ನಲ್ಲಿ ರಾಮಾಯಣ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಮಾತುಗಳೆ ಕೇಳಿ ಬರುತ್ತಿವೆ. ಬಿಜಿಎಸ್ ಉತ್ಸವ-2023ರ ಕಾರ್ಯಕ್ರಮದಲ್ಲಿ ಈ ಕುರಿತು ಮಾತನಾಡಿದ್ದಾರೆ.

ತುಂಬಾ ಜನ ಅವರ ಖುಷಿಗೆ ಪ್ರತಿ ಹಬ್ಬ ಬಂದಾಗ ತಿಂಗಳು ಅಪ್ ಡೇಟ್ ಅಂತಾ ಹೇಳಿ ನಿಮಗೆ ತಾಳ್ಮೆ ಕಮ್ಮಿಯಾಗಿದೆ. ಇದರಿಂದ ತಪ್ಪು ಸಂದೇಶ ಸಹ ಹೋಗ್ತಿದೆ. ನಾನೇ ಹೇಳ್ತೀನಿ. ತಾಳ್ಮೆ ಇಟ್ಕೊಳ್ಳಿ. ಸರಿಯಾಗಿ ಅಡಿಗೆ ಬೆಂದಮೇಲೆ ಬಡಿಸಬೇಕು. ಮುಂಚೆನೆ ಬಡಿಸೋದು ನನಗೆ ಇಷ್ಟವಿಲ್ಲ. ನೀವು ಕೊಟ್ಟ ಸಕಸ್ಸ್ ಜವಾಬ್ದಾರಿ ಎಂದುಕೊಂಡು ಇನ್ನು ಮುಂದೆ ಹೋಗಿ ಕೆಲಸ ಮಾಡಬೇಕು ಎಂದು ಸಿದ್ಧನಾಗಿದ್ದೀನಿ. ನಮ್ಮ ಸಿನಿಮಾಗಳನ್ನು ನೋಡಿ ಬೆನ್ನು ತಟ್ಟಿದ್ದಕ್ಕೆ ಇಲ್ಲಿಗೆ ಬಂದಿದ್ದೇವೆ. ಹೊಸಬರು ಬರುತ್ತಿದ್ದಾರೆ. ಅವರ ಸಿನಿಮಾಗಳನ್ನು ನೋಡಿ ಬೆನ್ನು ತಟ್ಟಿ ಎನ್ನುವ ಮೂಲಕ ತಮ್ಮ 19ನೇ ಸಿನಿಮಾದ ಬಗ್ಗೆ ಏನ್ನನ್ನೂ ಹೇಳಲಿಲ್ಲ.




Leave a Reply

Your email address will not be published. Required fields are marked *

error: Content is protected !!