ಯಶ್ ಬ್ಯಾನರ್ ಕಟ್ಟಲು ಹೋಗಿ ಮೂವರ ಸಾವು

139

ಪ್ರಜಾಸ್ತ್ರ ಸುದ್ದಿ

ಗದಗ: ನಟ ಯಶ್ ಹುಟ್ಟು ಹಬ್ಬದ ಹಿನ್ನಲೆಯಲ್ಲಿ ಮಧ್ಯರಾತ್ರಿ ಬ್ಯಾನರ್ ಕಟ್ಟಲು ಹೋದ ಅಭಿಮಾನಿಗಳಿಗೆ ವಿದ್ಯುತ್ ತಗುಲಿ ಮೂವರು ಮೃತಪಟ್ಟಿರುವ ಘಟನೆ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೊರಣಗಿಯಲ್ಲಿ ನಡೆದಿದೆ. ಇನ್ನೂ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ನವೀನ್ ಗಾಜಿ(19), ಮುರಳಿ ನಡುವಿನಮನಿ(20) ಹಾಗೂ ಹನುಮಂತ ಹರಿಜನ(21) ಮೃತ ಯುಕವರು. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಯಶ್ ಹುಟ್ಟು ಹಬ್ಬದ ಹಿನ್ನಲೆಯಲ್ಲಿ ಅಭಿಮಾನಿಗಳು ಬೃಹತ್ ಬ್ಯಾನರ್ ಕಟ್ಟಲು ಹೋದಾಗ ದುರಂತ ನಡೆದಿದೆ.

ಸಿನಿಮಾ ನಟರ ಸಲುವಾಗಿ ಯುವಕರು ತಮ್ಮ ಪ್ರಾಣ ಕಳೆದುಕೊಳ್ಳುತ್ತಿರುವುದಕ್ಕೆ ಅನೇಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನಿಮ್ಮ ಕುಟುಂಬಸ್ಥರ ಸಲುವಾಗಿ ಏನೂ ಮಾಡದ ನೀವು, ನೆಚ್ಚಿನ ನಟನ ಸಲುವಾಗಿ ಹುಚ್ಚು ಕೆಲಸಕ್ಕೆ ಕೈ ಜೀವ ಕಳೆದುಕೊಂಡು ಮನೆಯವರಿಗೆ ನೋವು ಕೊಡುತ್ತಿದ್ದೀರಿ ಅಂತಾ ಸೋಷಿಯಲ್ ಮೀಡಿಯಾದಲ್ಲಿ ಕಿಡಿ ಕಾರಲಾಗುತ್ತಿದೆ.




Leave a Reply

Your email address will not be published. Required fields are marked *

error: Content is protected !!