ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಹಾಸನ: ಜಮೀನಿಗೆ ಹೋಗಲು ರಸ್ತೆ ನಿರ್ಮಿಸುವ ಸಂಬಂಧ ದುದ್ದು ಹೋಬಳಿ ವ್ಯಾಪ್ತಿ ತಿಮ್ಲಾಪುರ ಗ್ರಾಮಸ್ಥರು ಹಾಗೂ ನಟ ಯಶ ಕುಟುಂಬಸ್ಥರ ನಡುವೆ ನಡೆದ ಗಲಾಟೆ ವಿಚಾರವಾಗಿ, ನಟ ಯಶ ವಿರುದ್ಧ ಶನಿವಾರ ದೂರು ದಾಖಲಿಸಲಾಗಿದೆ. ರೈತ ಸಂಘ ನಟ ಯಶ ವಿರುದ್ಧ ಜಿಲ್ಲಾಧಿಕಾರಿಗೆ ದೂರು ನೀಡಿದೆ.
ನಟರಾದರೆ ಏನು ಬೇಕಾದರೂ ಮಾಡಬಹುದು ಅನ್ನೋದು ತಲೆಯಿಂದ ತೆಗೆದು ಹಾಕಬೇಕು. ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ಮೇಲೆ ರೈತರ ಮೇಲೆ ಯಾಕೆ ಕೂಗಾಡಬೇಕಿತ್ತು ಎಂದು ರೈತ ಸಂಘದ ಕಾರ್ಯಾಧ್ಯಕ್ಷ ಅಣ್ಣಾಜಪ್ಪ ಹೇಳಿದ್ದಾರೆ.