ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಸ್ಯಾಂಡಲ್ ವುಡ್ ನಟ ರಾಕಿಂಗ್ ಸ್ಟಾರ್ ಯಶ್ ಇದೀಗ ನಿರ್ಮಾಪಕರಾಗಿ ಹೊಸ ಇನ್ನಿಂಗ್ಸ್ ಶುರು ಮಾಡಿದ್ದಾರೆ. ಬಾಲಿವುಡ್ ನ ಬಹುನಿರೀಕ್ಷಿತ ರಾಮಾಯಣ ಸಿನಿಮಾಗೆ ಯಶ್ ಬಂಡಾವಳ ಹೂಡುತ್ತಿದ್ದಾರೆ.
ನಿರ್ಮಾಪಕ ನಮಿತ್ ಮಲ್ಹೋತ್ರಾ ಜೊತೆಗೆ ಯಶ್ ಕೈ ಜೋಡಿಸಿದ್ದಾರೆ. ಮಾನ್ ಸ್ಟಾರ್ ಮೈಂಡ್ ಕ್ರಿಯೇಷನ್ ಮೂಲಕ ನಿರ್ಮಾಪಕರಾಗುತ್ತಿದ್ದಾರೆ. ಮಲ್ಹೋತ್ರಾ ಅವರ ಪ್ರೈಂ ಫೋಕಸ್ ಸ್ಟುಡಿಯೊ ಜೊತೆಗೆ ಯಶ್ ಮಾಲೀಕತ್ವದ ಸಂಸ್ಥೆ ರಾಮಾಯಣ ಸಿನಿಮಾ ನಿರ್ಮಿಸುತ್ತಿದೆ.
ಕೆಜಿಎಫ್ ಬಳಿಕ ಎರಡು ವರ್ಷಗಳ ನಂತರ ಘೋಷಣೆ ಮಾಡಿದ ಟಾಕ್ಸಿಕ್ ಸಿನಿಮಾದಲ್ಲಿ ನಟನೆಯ ಜೊತೆಗೆ ಬಂಡವಾಳ ಸಹ ಹೂಡುತ್ತಿದ್ದಾರೆ. ಕೆವಿಎನ್ ಪ್ರೊಡಕ್ಷನ್ ಜೊತೆಗೆ ಮಾನ್ ಸ್ಟಾರ್ ಮೈಂಡ್ ಕ್ರಿಯೇಷನ್ ಪಾಲುದಾರಿಕೆ ಹೊಂದಿದೆ.
ದಂಗಲ್ ಚಿತ್ರದ ಖ್ಯಾತಿಯ ನಿರ್ದೇಶಕ ನಿತೀಶ್ ತಿವಾರಿ ರಾಮಾಯಣ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ನಟ ರಣಬೀರ್ ಕಪೂರ್ ರಾಮನಾಗಿ, ತಮಿಳು ನಟಿ ಸಾಯಿ ಪಲ್ಲವಿ ಸೀತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಯಶ್ ರಾವಣನಾಗಿ ಕಾಣಿಸಿಕೊಳ್ಳಲಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿತ್ತು. ಆದರೆ, ಅವರು ಇಲ್ಲಿ ಬಂಡವಾಳ ಹೂಡುತ್ತಿದ್ದಾರೆ.