ಸಿಂದಗಿ: ತಾಲೂಕಿನ ಮೊರಟಗಿ ಸಮೀಪದ ಕ್ಯಾನಲ್ ಬಳಿ ಬೈಕ್ ಸ್ಕಿಡ್ ಆಗಿ ಅಪಘಾತ ಸಂಭವಿಸಿದೆ. ನಿನ್ನೆ ಸಂಜೆ ಸುಮಾರು 5.30 ರ ಟೈಂನಲ್ಲಿ ಈ ಅಪಘಾತ ಸಂಭವಿಸಿದೆ. ಈ ವೇಳೆ ಬೈಕ್ ಸವಾರರಾದ ರಾಜು ಹಾಗೂ ಮಹಾದೇವ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ರು. ಮೊರಟಗಿಯಿಂದ ಘತ್ತರಗಿ ಕಡೆ ಹೊರಟಿದ್ದ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ.
ಗಾಯಾಳುಗಳನ್ನ ಮೊದಲು ಮೊರಟಗಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕತ್ಸೆ ಕೊಡಿಸಿ, ಬಳಿಕ ಸಿಂದಗಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ತದನಂತರ ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪುರದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ರಾತ್ರಿ ಸುಮಾರು 10.45ರ ಟೈಂನಲ್ಲಿ ಆಸ್ಪತ್ರೆಯ ಬೆಡ್ ಮೇಲೆ ಹಾಕುವಷ್ಟರಲ್ಲಿ ಗಾಯಾಳು ರಾಜು ಎಂಬಾತ ಸಾವನ್ನಪ್ಪಿದ್ದಾನೆ ಅನ್ನೋದು ತಿಳಿದು ಬಂದಿದೆ.
ಮೃತ ರಾಜು ಬನಸೊಡೆ ಹಾಗೂ ಗಾಯಾಳು ಮಹಾದೇವ ಬಿಲ್ಲಾಡ ಇಬ್ಬರು ಅಫಜಲಪುರ ತಾಲೂಕಿನ ಘತ್ತರಗಿ ಮೂಲದವರಾಗಿದ್ದಾರೆ. ಈ ಸಂಬಂಧ ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.