ಎಸ್ಟಿ ಸಮಾವೇಶದಲ್ಲಿ ಸಿದ್ದರಾಮಯ್ಯ ವಿರುದ್ಧ ಸಿಎಂ ವಾಗ್ದಾಳಿ

154

ಪ್ರಜಾಸ್ತ್ರ ಸುದ್ದಿ

ಬಳ್ಳಾರಿ: ನಗರದಲ್ಲಿ ಭಾನುವಾರ ಎಸ್ಟಿ ನವಶಕ್ತಿ ಸಮಾವೇಶ ನಡೆಯಿತು. ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ ಅವರು, ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು. ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲು ಮುನ್ನುಡಿ ಬರೆದ ಸಮಾವೇಶ. ರಾಮುಲು ಅನ್ನು ಪೆದ್ದ ಅಂತಿಯಾ ಸಿದ್ರಾಮಣ್ಣಾ, ನೀನು ಬಾಳ ಬುದ್ದಿವಂತ ಅಲ್ವಾ ಎಂದು ಕಿಡಿ ಕಾರಿದರು.

ಕೇಂದ್ರದಲ್ಲಿ ಶೇಕಡ 3ರಷ್ಟು ಇದ್ದ ಮೀಸಲಾತಿಯನ್ನು ಶೇಕಡ 7ರಷ್ಟು ಮಾಡಿದ್ದು ಮೋದಿ ಅವರು. 60 ವರ್ಷ ಕಾಂಗ್ರೆಸ್ ನವರು ಏನು ಮಾಡಿದರು? ಸಿದ್ದರಾಮಯ್ಯ ಇಲ್ಲಿ ಬಂದು ನೋಡಪ್ಪ ಎಸ್ಟಿ, ಎಸ್ಟಿ ನಮ್ಮ ಜೊತೆ ಇದ್ದಾರೆ. ನಿಮ್ಮ ನಾಟಕ ಇನ್ನು ಮುಂದೆ ನಡೆಯಲ್ಲ ಎಂದು ತಿವಿದರು.

ಮಾಜಿ ಸಿಎಂ ಬಿಎಸ್ವೈ ಮಾತನಾಡಿ, ನವಶಕ್ತಿ ಸಮಾವೇಶದಿಂದ ಕಾಂಗ್ರೆಸ್ ನವರು ಅಂಜಿದ್ದಾರೆ. ಖಜಾನೆ ಲೂಟಿ ಮಾಡಿದ್ದೇ ಕಾಂಗ್ರೆಸ್. ಈ ಸಮಾಜಕ್ಕೆ ದ್ರೋಹ ಮಾಡಿದ್ದಾರೆ ಎಂದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಸೇರಿ ಅನೇಕರು ಮಾತನಾಡಿದರು.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಕರ್ನಾಟಕ ಉಸ್ತುವಾರಿ ಅರುಣ್ ಸಿಂಗ್, ರಾಜ್ಯ ಸಚಿವರಾದ ಶ್ರೀರಾಮುಲು, ಆನಂದ್ ಸಿಂಗ್, ಚೌಹಾಣ್, ಗೋವಿಂದ್ ಕಾರಜೋಳ, ಮಾಜಿ ಸಚಿವ ಸವದಿ, ಶಾಸಕ ಸಿ.ಟಿ ರವಿ ಸೇರಿದಂತೆ ಅನೇಕ ನಾಯಕರು ಭಾಗವಹಿಸದ್ದರು.




Leave a Reply

Your email address will not be published. Required fields are marked *

error: Content is protected !!