‘ಅಂಧ’ದ ಜೋಡಿಗೆ ನೆರವಾದ ಸಹಪಯಣಿಗರು

321

ಪ್ರಜಾಸ್ತ್ರ ವಿಶೇಷ

ವಿಜಯಪುರ: ಇವತ್ತು ಏನಿದ್ದರೂ ದುಡ್ಡಿನ ದುನಿಯಾ. ದುಡ್ಡು ಇದ್ದರೆ ಸ್ನೇಹ, ಸಂಬಂಧ. ಹೀಗಾಗಿ ಇನ್ನೊಬ್ಬರ ಜೀವನ ಹಾಳು ಮಾಡಿಯಾದರೂ, ತುಳಿದು ಸಂಪಾದನೆ ಮಾಡುವ ಜನರೇ ಹೆಚ್ಚು. ಇಂತವರ ನಡುವೆ ನಮ್ಗೆ ಸ್ನೇಹವೇ ಮುಖ್ಯವೆಂದು ಅಂಧದ ಜೋಡಿಯ ಮದ್ವೆಯನ್ನ ಅವರ ಸ್ನೇಹಿತರು ಮಾಡಿದ್ದಾರೆ.

ಅಂಧರ ಹೊಸ ಬಾಳಿಗೆ ಅಂಧರೆ ದಾರಿ ದೀಪವಾಗಿರುವ ಅಪರೂಪದ ಘಳಿಗೆಗೆ ಐತಿಹಾಸಿಕ ಗುಮ್ಮಟನಗರಿ ಸಾಕ್ಷಿಯಾಗಿದೆ. ನಟರಾಜ ಹಾಗೂ ಗಾಯಿತ್ರಿ ಅನ್ನೋ ಅಂಧದ ಜೋಡಿಗೆ, ಅಂಧ ಸ್ನೇಹಿತರು ಕೈಲಾದಷ್ಟು ಹಣ ಹೊಂದಿಸಿ, ಉಳಿದ ಹಣಕ್ಕಾಗಿ ಜಿಲ್ಲೆಯ ಇತರರಿಂದ ಸಹಾಯ ಪಡೆದು ಮದುವೆ ಮಾಡಿಸಿದ್ದಾರೆ.

ವಿಜಯಪುರ ನಗರದ ಸೃಷ್ಟಿ ಕಾಲನಿಯಲ್ಲಿ ಮದುವೆ ನಡೆದಿದೆ. ಈ ಮದುವೆಯ ಖರ್ಚು ವೆಚ್ಚಾಕ್ಕಾಗಿ ಅಂಧ ಸ್ನೇಹಿತರೇ ನಗರದಲ್ಲಿ ಓಡಾಡಿ ಹಣಕಾಸಿನ ನೆರವು ಪಡೆದು ತಮ್ಮ ಸ್ನೇಹಿತರ ಮದುವೆಯಲ್ಲಿ ಯಾವುದೇ ಕುಂದುಕೊರತೆಗಳು ಆಗದಂತೆ ನೋಡಿಕೊಂಡಿದ್ದಾರೆ. ಇದರೊಂದಿಗೆ ನಮ್ಗೆ ಸ್ನೇಹ ದೊಡ್ಡದು ಎಂದಿದ್ದಾರೆ. ಇವರಿಗೆ ಸಹಕರಿಸಿದ ಜನಕ್ಕೂ ಮೆಚ್ಚುಗೆ ವ್ಯಕ್ತವಾಗಿದೆ.




Leave a Reply

Your email address will not be published. Required fields are marked *

error: Content is protected !!