ಶಿಮ್ಲಾ: ಉತ್ತರ ಭಾರತದಲ್ಲಿ ಶೀತಗಾಳಿ ಜೋರಾಗಿದೆ. ಅಲ್ದೇ, ಭಾರೀ ಪ್ರಮಾಣದಲ್ಲಿ ಹಿಮ ಬೀಳ್ತಿದೆ. ಹಿಮಾಚಲ ಪ್ರದೇಶದಲ್ಲಿ ಹಿಮದಿಂದಾಗಿ ರಸ್ತೆ ಸಂಚಾರ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ. ಸುಮಾರು 250 ರಸ್ತೆಗಳು ಬಂದ್ ಆಗಿವೆ ಅಂತಾ ಹೇಳಲಾಗ್ತಿದೆ.
ಶಿಮ್ಲಾ ಹಾಗೂ ಮನಾಲಿಯಂತಾ ಜನಪ್ರಿಯ ಪ್ರವಾಸಿ ತಾಣಗಳಿಗೆ ಭೇಟಿ ನೀಡಬೇಡಿ ಎಂದು ಮನವಿ ಮಾಡಿಕೊಳ್ಳಲಾಗಿದೆ. ಹೀಗೆ ಪ್ರವಾಸಕ್ಕೆ ಬಂದಿರುವ ಅನೇಕ ಪ್ರವಾಸಿಗರು ಶಿಮ್ಲಾದಲ್ಲಿ ಸಿಲುಕಿ ಹಾಕಿಕೊಂಡಿದ್ದಾರೆ ಅಂತಾ ತಿಳಿದುಬಂದಿದ್ದು, ಹಿಮಾಚಲ ಪೊಲೀಸ್ರು ಸೋಷಿಯಲ್ ಮೀಡಿಯಾ ಮೂಲಕ ಮನವಿ ಮಾಡಿಕೊಳ್ತಿದ್ದಾರೆ.
ಹಿಮ ಮಳೆಯಿಂದಾಗಿ ರಸ್ತೆಗಳ ಮೇಲೆಲ್ಲಾ ಹಿಮದ ರಾಶಿ ತುಂಬಿಕೊಂಡಿದೆ. ಎಲ್ಲಿ ರಸ್ತೆಯಿದೆ. ಎಲ್ಲಿ ಬೆಟ್ಟವಿದೆ. ಏನು ಅನ್ನೋದು ಒಂದು ತಿಳಿಯದು. ಹೀಗಾಗಿ ಪ್ರಾಣಕ್ಕೆ ಕುತ್ತಾಗುವ ಸಾಧ್ಯತೆಯಿದ್ದು, ಸದ್ಯಕ್ಕೆ ಶಿಮ್ಲಾ, ಮನಾಲಿ ಪ್ರವಾಸಕ್ಕೆ ಹೋಗುವವರು ಬ್ರೇಕ್ ತೆಗೆದುಕೊಳ್ಳುವುದು ಒಳ್ಳೆಯದು.