ಶಿಮ್ಲಾ: ನಿನ್ನ ಹಿಮಾಚಲ ಪ್ರದೇಶದಲ್ಲಿ ಸಂಭವಿಸಿದ ಖಾಸಗಿ ಬಸ್ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 44ಕ್ಕೆ ಏರಿಕೆಯಾಗಿದೆ. ಇನ್ನೂ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ ಅಂತಾ ಹೇಳಲಾಗ್ತಿದೆ.
ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಸ್ ಕಣಿವೆಗೆ ಉರುಳಿದ ಪರಿಣಾಮ ಸ್ಥಳದಲ್ಲಿಯೇ 10 ಮಂದಿ ಸಾವನ್ನಪ್ಪಿದ್ರು. ತೀವ್ರಗಾಯಗೊಂಡವರನ್ನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇದೀಗ ಸಾವಿನ ಸಂಖ್ಯೆ 44 ಆಗಿದೆ ಅಂತಾ ತಿಳಿದು ಬಂದಿದೆ.
ಕುಲ್ಲು ಜಿಲ್ಲೆಯಿಂದ ಗಡ ಗುಶೈನಿಯತ್ತ ಬಸ್ ಪ್ರಯಾಣಿಸ್ತಿದ್ದು, ಸಾಮಾರ್ಥ್ಯಕ್ಕಿಂತ ಹೆಚ್ಚು ಜನರು ಬಸ್ ನಲ್ಲಿದ್ರೂ ಅಂತಾ ಹೇಳಲಾಗ್ತಿದೆ. ಬಸ್ ನಲ್ಲಿ 70 ಮಂದಿ ಪ್ರಯಾಣಿಸ್ತಿದ್ದು, ಇದೀಗ ಈ ದುರಂತದಿಂದ 44 ಮಂದಿ ಸಾವನ್ನಪ್ಪಿದ್ದಾರೆ ಎನ್ನಲಾಗ್ತಿದೆ. ದುರಂತಕ್ಕೆ ಸಂಬಂಧಿಸಿದಂತ ಪ್ರಧಾನಿ ಮೋದಿ ಕಂಬನಿ ಮೀಡಿದಿದ್ದು, ಟ್ವೀಟ್ ನಲ್ಲಿ ಸಾವಿಗೀಡಾದವರಿಗೆ ಶಾಂತಿ ಕೋರಿದ್ದಾರೆ.