ಪ್ರಜಾಸ್ತ್ರ ಸುದ್ದಿ
ಸಿಂದಗಿ: ಪಟ್ಟಣದ ಗುರುದೇವ ಆಶ್ರಮದಲ್ಲಿ ಪ್ರಜಾಸ್ತ್ರ ವೆಬ್ ಪತ್ರಿಕೆ ವತಿಯಿಂದ ನಡೆಯುತ್ತಿರುವ ಬೇಸಿಗೆ ಕಲಾ ಮೇಳದಲ್ಲಿ ಬುದ್ಧ ಪೂರ್ಣಿಮೆ ಆಚರಿಸಲಾಯಿತು. ಸೋಮವಾರ ಸಂಜೆ ಆವರಣದಲ್ಲಿರುವ ಅರಳಿಮರದ ಕೆಳಗೆ ತುಂಬಾ ಅರ್ಥಪೂರ್ಣವಾಗಿ ಸರಳವಾಗಿ ಮಕ್ಕಳೊಂದಿಗೆ ಬುದ್ಧ ಪೂರ್ಣಿಮೆ ಆಚರಿಸಲಾಯಿತು.
ಕಲಾ ಮೇಳದಲ್ಲಿ ಮಾರಿಕುಣಿತ ಹೇಳಿಕೊಡುತ್ತಿರುವ ಮೈಸೂರಿನ ಪುಟ್ಟಸ್ವಾಮಿ ಅವರು, ಮಕ್ಕಳಿಗೆ ಬುದ್ಧ ಗೀತೆ ಹೇಳಿ ಕೊಟ್ಟರು. ನಂತರ ಮಾತನಾಡಿದ ಅವರು, ಸಿದ್ಧಾರ್ಥ ಬುದ್ಧನಾದ್ದು ಹೇಗೆ ಅನ್ನೋದು ಕುರಿತು ಸಂಕ್ಷಿಪ್ತವಾಗಿ ತಿಳಿಸಿಕೊಟ್ಟರು. ಅದೇ ರೀತಿ ಕಲಾ ಮೇಳದ ಸಂಯೋಜಕರು ಹಾಗೂ ಪ್ರಜಾಸ್ತ್ರ ವೆಬ್ ಪತ್ರಿಕೆ ಸಂಪಾದಕ ನಾಗೇಶ ತಳವಾರ ಮಾತನಾಡಿದರು.