ಪ್ರಜಾಸ್ತ್ರ ಸುದ್ದಿ
ಸಿಂದಗಿ: ತೀವ್ರ ಬಸ್ ಸಮಸ್ಯೆಯಿಂದ ವಿದ್ಯಾಭ್ಯಾಸಕ್ಕೆ ಸಾಕಷ್ಟು ತೊಂದರೆ ಅನುಭವಿಸುತ್ತಿರುವ ತಾಲೂಕಿನ ಸಾಸಾಬಾಳ ಗ್ರಾಮದ ವಿದ್ಯಾರ್ಥಿಗಳು, ಮಂಗಳವಾರ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಸುಮಾರು 2 ಗಂಟೆಗಳ ಕಾಲ ರಾಜ್ಯ ಹೆದ್ದಾರಿ ತಡೆದ ವಿದ್ಯಾರ್ಥಿಗಳು ತಮ್ಮ ಆಕ್ರೋಶ ಹೊರ ಹಾಕಿದರು. ವಿದ್ಯಾರ್ಥಿಗಳಿಗೆ ಗ್ರಾಮದ ಮುಖಂಡರು, ಯುಕವರು ಸಾಥ್ ನೀಡಿ, ತಮ್ಮೂರಿಗೆ ಆಗುತ್ತಿರುವ ಬಸ್ಸಿನ ಸಮಸ್ಯೆ ಕುರಿತು ಸಿಂದಗಿ ಬಸ್ ಡಿಪೋ ವ್ಯವಸ್ಥಾಪಕ ರೇವಣಸಿದ್ಧ ಖೈನೂರ ಮುಂದೆ ಹೇಳಿದರು. ವಿದ್ಯಾರ್ಥಿಗಳ ಪ್ರತಿಭಟನೆಯಿಂದಾಗಿ ಕೆಲ ಕಾಲ ರಸ್ತೆ ಸಂಚಾರದಲ್ಲಿ ಅಡಚಣೆಯಾಯಿತು.
ಇಲ್ಲಿನ ಸಮಸ್ಯೆ ಅರಿತ ಡಿಪೋ ವ್ಯವಸ್ಥಾಪಕರು, ಅಂತಾರಾಜ್ಯ ಬಸ್ ಗಳನ್ನು ಹೊರತುಪಡಿಸಿ ಉಳಿದ ಬಸ್ ಗಳನ್ನು ಸಾಸಾಬಾಳ ಕ್ರಾಸ್ ಹತ್ತಿರ ನಿಲ್ಲಿಸಲಾಗುವುದು ಎಂದು ಭರವಸೆ ನೀಡಿದರು. ಆ ಬಳಿಕ ವಿದ್ಯಾರ್ಥಿಗಳು ಪ್ರತಿಭಟನೆಯನ್ನು ಕೈ ಬಿಟ್ಟರು. ಈ ವೇಳೆ ವಿವಿಧ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳು, ವಿಜಯಪುರ ಡಿಎಸ್ಎಸ್ ಸಂಚಾಲಕರಾದ ಶ್ರೀಶೈಲ ಜಾಲವಾದಿ, ಗ್ರಾಮದ ಮುಖಂಡರಾದ ಧರ್ಮು ರಾಠೋಡ, ಚಂದ್ರಕಾಂತ ಪೂಲೇಶಿ, ಭೀಮು ಚಳ್ಳಗಿ, ಮಲ್ಲನಗೌಡ ಬಿರಾದಾರ, ಬಂದಗಿಸಾಬ್ ಯಡ್ರಾಮಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.