ಭೀಕರ ರಸ್ತೆ ಅಪಘಾತಕ್ಕೆ 7 ಜನ ದುರ್ಮರಣ

405

ಪ್ರಜಾಸ್ತ್ರ ಸುದ್ದಿ

ರಾಯ್ಪುರ್: ಬಸ್ ಹಾಗೂ ಟ್ರಕ್ ನಡುವೆ ಸಂಭವಿಸಿದ ಅಪಘಾತದಲ್ಲಿ 7 ಜನರು ಸಾವನ್ನಪ್ಪಿದ್ದು, 7 ಜನರಿಗೆ ಗಂಭೀರ ಗಾಯಗಳಾಗಿವೆ. ಈ ದಾರುಣ ಘಟನೆ ಛತ್ತೀಸಗಢದ ರಾಯ್ಪುರದಲ್ಲಿ ನಡೆದಿದೆ.

ಒಡಿಶಾದ ಗಂಜಾಮ್ ನಿಂದ ಕಾರ್ಮಿಕರನ್ನ ಹೊತ್ತುಕೊಂಡು ಸೂರತಗೆ ಬಸ್ ಹೊರಟಿತ್ತು. ಎದುರಿಗೆ ಬರ್ತಿದ್ದ ಟ್ರಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಭೀಕರ ಅಪಘಾತದಿಂದ 7 ಜನರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. 7 ಜನರಿಗೆ ಗಾಯಗಳಾಗಿವೆ ಎಂದು ಪೊಲೀಸ್ ಅಧಿಕಾರ ಅಜಯ ಯಾಧವ ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!