ಪ್ರಜಾಸ್ತ್ರ ಸುದ್ದಿ
ನಾಗಮಂಗಲ: ಶಿಕ್ಷಕರ ದಿನಾಚರಣೆ ಪ್ರಯುಕ್ತ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಂಡ್ಯದ ವತಿಯಿಂದ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ, ತಾಲೂಕಿನಿಂದ ಆಯ್ಕೆಯಾಗಿರುವ ಶಿಕ್ಷಕರ ಆಯ್ಕೆಯ ಬಗ್ಗೆ ಶಿಕ್ಷಕ ವರ್ಗ ಮತ್ತು ಸಾರ್ವಜನಿಕ ವಲಯದಲ್ಲಿ ಅಪಸ್ವರ ಕೇಳಿ ಬರುತ್ತಿದೆ.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಉತ್ತಮ ಶಿಕ್ಷಕ ಪ್ರಶಸ್ತಿ ಆಯ್ಕೆ ಸಂಬಂಧ ಮಾಜಿ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಖಜಾಂಚಿ ಕೊಣನೂರು ಧನಂಜಯ ಮತ್ತು ಯೋಗ ಗುರು ಲಕ್ಷ್ಮಣ ಅವರು ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಎಂದು ಮೂರು ಜನರನ್ನ ಆಯ್ಕೆ ಮಾಡಲಾಗಿದೆ. ತಾಲೂಕಿನಲ್ಲಿ ಮೂವರನ್ನ ಇದುವರೆಗೂ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಮಾಡಿಲ್ಲ. ಇಲ್ಲಿನ ಜನರ ಕಣ್ಣಿಗೆ ಕಾಣದ ಉತ್ತಮ ಶಿಕ್ಷಕರು ಜಿಲ್ಲಾ ಸಾಹಿತ್ಯ ಪರಿಷತ್ತಿನ ಕಣ್ಣಿಗೆ ಹೇಗೆ ಕಂಡರು. ಈಗ ಆಯ್ಕೆಯಾಗಿರುವವರ ಮೇಲೆ ಹಲವಾರು ಆರೋಪಗಳಿವೆ ಎಂದು ಕಿಡಿ ಕಾರಿದ್ದಾರೆ.
ಯಾರದೋ ಒತ್ತಡಕ್ಕೋ ಬಲವಂತಕ್ಕೋ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಮಾಡವ ಮೊದಲು ಈ ಬಗ್ಗೆ ಯೋಚಿಸಬೇಕಿದೆ. ಮುಂದಿನ ದಿನಗಳಲ್ಲಿ ಹೀಗೆ ಆಗದಂತೆ ನೋಡಿಕೊಳ್ಳಬೇಕಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.