ಅಲ್ಪಸಂಖ್ಯಾತರಿಗೆ ರೆಡ್ಡಿ ಧಮ್ಕಿ: ಪ್ರತಿಭಟನೆ

411

ಬಳ್ಳಾರಿ: ಪೌರತ್ವ ಕಾಯ್ದೆ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿ ಅಲ್ಪಸಂಖ್ಯಾತರ ವಿರುದ್ದ ವಿವಾದಾತ್ಮಕ ಹೇಳಿಕೆ ನೀಡಿದ್ರು. ಇದನ್ನ ಖಂಡಿಸಿ ನಗರದಲ್ಲಿ ದಿಢೀರ್ ಪ್ರತಿಭಟನೆ ಪ್ರತಿಭಟನೆ ನಡೆಸಲಾಗ್ತಿದೆ.

ನಗರದ ಮೋತಿ ವೃತ್ತ, ಹೊಸ ಬಸ್ ನಿಲ್ದಾಣ ಸೇರಿದಂತೆ ಅನೇಕ ಕಡೆ ವಾಹನಗಳನ್ನ ತಡೆದು ದಿಢೀರ್ ಪ್ರತಿಭಟನೆಗೆ ಮುಂದಾಗಿದ್ದು, ಸಂಚಾರ ವ್ಯವಸ್ಥೆ ಸಂಪೂರ್ಣ ಅಸ್ತವ್ಯವಸ್ತವಾಗಿದೆ. ಸ್ಥಳದಲ್ಲಿ ಪೊಲೀಸ್ರು ಮುಕ್ಕಾಂ ಹೂಡಿದ್ದು ಬಿಗಿ ಬಂದೋಬಸ್ತಿ ಕೈಗೊಂಡಿದ್ದಾರೆ.

ಹಿಂದೂಗಳು ಶೇಕಡ 80ರಷ್ಟು ಇದ್ದಾರೆ. ನೀವು ಕೇವಲ ಶೇಕಡ 17ರಷ್ಟು ಇದ್ದೀರಿ. ಯಾವುದೇ ಹೆಜ್ಜೆ ಇಡುವ ಮೊದ್ಲು ಎಚ್ಚರಿಕೆಯಿಂದ ಇರಿ. ಕಾಂಗ್ರೆಸ್ ನವರು ಮೂರ್ಖರು. ಅವರನ್ನ ನಂಬಿ ನೀವು ರಸ್ತೆಗೆ ಇಳಿದಿದ್ದೀರಿ. ನಾವು ತಿರುಗಿ ನಿಂತರೆ ಏನಾಗಬಹುದು ಊಹಿಸಿರಿ ಎಂದು ಧಮ್ಕಿ ಹಾಕುವ ಮೂಲಕ ವಿವಾದದ ಕಿಡಿ ಹಚ್ಚಿದ್ರು.




Leave a Reply

Your email address will not be published. Required fields are marked *

error: Content is protected !!