ಲಖನೌ: ಸಿಎಎ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ ಶಾ ಹಾಕಿರುವ ಸವಾಲನ್ನ ಉತ್ತರ ಪ್ರದೇಶ ಮಾಜಿ ಸಿಎಂ, ಬಿಎಸ್ಪಿ ನಾಯಕಿ ಮಾಯಾವತಿ ಸ್ವೀಕರಿಸಿದ್ದಾರೆ. ಅಮಿತ ಶಾ ಅವರು ಯಾವುದೇ ಸಾರ್ವಜನಿಕ ವೇದಿಕೆ, ಸ್ಥಳದಲ್ಲಿ ಚರ್ಚೆಗೆ ಕರೆದ್ರೆ ತಾವು ಬರಲು ಸಿದ್ಧರಿದ್ದೇವೆ ಅಂತಾ ಹೇಳಿದ್ದಾರೆ.
ಪೌರತ್ವ ಕಾಯ್ದೆ ವಿಚಾರವಾಗಿ ಸಾರ್ವಜನಿಕ ಸಭೆಯಲ್ಲಿ ಮಾತ್ನಾಡಿದ್ದ ಅಮಿತ ಶಾ, ರಾಹುಲ ಗಾಂಧಿ, ಮಮತಾ ಬ್ಯಾನರ್ಜಿ, ಅಖಿಲೇಶ ಯಾದವ, ಮಾಯಾವತಿ ಅವರು ಸಾರ್ವಜನಿಕ ಚರ್ಚೆಗೆ ಬರುವಂತೆ ಸವಾಲು ಹಾಕಿದ್ದಾರೆ. ಇದನ್ನ ಮಾಯಾವತಿ ಸ್ವೀಕರಿಸಿದ್ದಾರೆ.