ವಿಜಯಪುರ: ಲಾರಿ ಹಾಗೂ ಕಾರ್ ನಡುವೆ ಅಪಘಾತ ಸಂಭವಿಸಿದ ಘಟನೆ ಕೋಲ್ಹಾರ ತಾಲೂಕಿನ ಹಳ್ಳದ ಗೆಣ್ಣೂರ ಕ್ರಾಸ್ ಬಳಿ ನಡೆದಿದೆ. ಮೂವರಿಗೆ ಗಂಭೀರ ಗಾಯಗಳಾಗಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.
KA 22 D 0733 ಲಾರಿ ವಿಜಯಪುರ ಮಾರ್ಗವಾಗಿ ಬರುತ್ತಿದ್ದ KA-28 M 8791 ಕಾರ್ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಲಾರಿ ಚಾಲಕನ ನಿರ್ಲಕ್ಷ್ಯದಿಂದ ಅಪಘಾತ ನಡೆದಿದೆ ಎನ್ನಲಾಗ್ತಿದೆ. ಕಾರ್ ಚಾಲಕ ಟೈರಿಂಗ್ ನಡುವೆ ಸಿಕಾಕ್ಕಿಕೊಂಡು ಒಡ್ತಿದ್ದಾಗ, ಪೊಲೀಸ್ ಹಾಗೂ ಸ್ಥಳೀಯರ ಸಹಕಾರದಿಂದ ಹರಸಹಾಸ ಪಟ್ಟು ಹೊರಕ್ಕೆ ಎಳೆಯಲಾಗಿದೆ.
ವಿಜಯಪುರ ತಾಲೂಕಿನ ಜಂಬಗಿ ಗ್ರಾಮದ ಗಣಪತಿ, ಮಾನಪ್ಪ, ಬಡಿಗೇರಗೆ ಗಂಭೀರ ಗಾಯವಾಗಿದೆ. ಕೋಲ್ಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.