ದಾದಿಯರ ದಿನಾಚರಣೆ ಸಂಭ್ರಮ

707

ಮಂಡ್ಯ: ಜಿಲ್ಲೆಯ ದುಂಡಶೆಟ್ಟಿ ಲಕ್ಷ್ಮಮ್ಮ ಸ್ಮಾರಕ ಸಾರ್ವಜನಿಕ ಆಸ್ಪತ್ರೆಯಲ್ಲಿ ವಿಶ್ವ ದಾದಿಯರ ದಿನಾಚರಣೆ ಆಚರಿಸಲಾಯ್ತು. ಈ ವೇಳೆ ನೊಬೆಲ್ ಶಾಂತಿ ಪ್ರಶಸ್ತಿ ಪಡೆದ ಮಹಾತಾಯಿ ಮದರ್ ತೆರೇಸಾ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.

ಹಿರಿಯ ಶುಶ್ರೂಷಕಿಯಾದ ಸೀತಮ್ಮ ಅವರ ನೇತೃತ್ವದಲ್ಲಿ ವಿಶ್ವದಾದಿಯರ ದಿನವನ್ನ ಆಚರಿಸಲಾಯ್ತು. ಬಡರೋಗಿಗಳ ಸೇವೆಯನ್ನ ಉಸಿರಾಗಿಸಿಕೊಂಡು, ಅರ್ಪಣಾ ಮನೋಭಾವದಿಂದ ದುಡಿಯುತ್ತಿರುವ ದಾದಿಯರು, ಕೊರೋನಾ ಸಂಕಷ್ಠದಲ್ಲೂ ಜೀವದ ಹಂಗು ತೊರೆದು ಸೇವೆ ಸಲ್ಲಿಸುತ್ತಿದ್ದಾರೆ ಎಂದು ಆಸ್ಪತ್ರೆಯ ಆಡಳಿತ ವೈದ್ಯ ಡಾ.ಶಿವಪ್ಪ ಶ್ಲಾಘಿಸಿದ್ರು.

ಈ ವೇಳೆ ಡಾ.ಜಯಪ್ರಕಾಶ, ಶುಶ್ರೂಷಕರಾದ ಕಲ್ಪನಾ, ಶೋಭಾ, ಲಕ್ಷ್ಮೀ, ರುಕ್ಮಿಣಿ, ಅನಿತಾ, ರಾಜಶೇಖರ, ಕಿಶೋರ್ ಮತ್ತಿತರರು ಭಾಗವಹಿಸಿದ್ದರು.




Leave a Reply

Your email address will not be published. Required fields are marked *

error: Content is protected !!