ವಿಜಯಪುರದಲ್ಲಿ ಸ್ಮಶಾನ ಸೀಲ್ ಡೌನ್

499

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಸ್ಮಶಾನದಲ್ಲಿ ಕರೋನಾದಿಂದ ಮೃತಪಟ್ಟವರ ಅಂತ್ಯಸಂಸ್ಕಾರ ಮಾಡಲಾಗ್ತಿದೆ ಎಂದು ಹೇಳಿ, ನಗರದಲ್ಲಿ ಸ್ಮಶಾನವನ್ನೇ ಸೀಲ್ ಡೌನ್ ಮಾಡಲಾಗಿದೆ. ಚಾಲುಕ್ಯ ನಗರದಲ್ಲಿನ ಸ್ಮಶಾನವನ್ನ ಸ್ಥಳೀಯರು ಸೀಲ್ ಡೌನ್ ಮಾಡಿದ್ದಾರೆ.

ಇತ್ತೀಚೆಗೆ ಪಿಪಿಇ ಕಿಟ್ ಧರಿಸಿ ಸಿದ್ಧೇಶ್ವರ ಸಂಸ್ಥೆಯ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಅದಕ್ಕಾಗಿ ಕರೋನಾ ಮೃತದೇಹವನ್ನ ಹೂಳ್ತಿದ್ದಾರೆಂದು ಸ್ಮಶಾನ ಜಾಗಕ್ಕೆ ಮುಳ್ಳು ಕಂಟಿ ಹಚ್ಚಿ ಸೀಲ್ ಡೌನ್ ಮಾಡಿ, ಆಕ್ರೋಶ ಹೊರಹಾಕಿದ್ದಾರೆ.

ಈಗ ಸ್ಮಶಾನಕ್ಕೂ ಸೀಲ್ ಡೌನ್ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಕರೋನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಗಳಿಗೂ ಸೋಂಕು ತಗುಲಿದಾಗ್ಲೂ ಸಮಸ್ಯೆ, ಮೃತಪಟ್ಟ ಮೇಲೂ ಸಮಸ್ಯೆ ಆಗ್ತಿದ್ದು, ಒಂದು ರೀತಿಯಲ್ಲಿ ಕರೋನಾ ಅನ್ನೋದು ಮನುಷ್ಯನಲ್ಲಿನ ಮನುಷ್ಯತ್ವವನ್ನು ಸಾಯಿಸ್ತಿದೆ ಎಂದು ಹೇಳಲಾಗ್ತಿದೆ.




Leave a Reply

Your email address will not be published. Required fields are marked *

error: Content is protected !!