ಜು.26ರೊಳಗೆ ಸಿಎಂ ರಾಜೀನಾಮೆ?

597

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ. ಎರಡು ವರ್ಷ ನಾನೇ ಮುಂದುವರೆಯುತ್ತೇನೆ ಎಂದು ಯಡಿಯೂರಪ್ಪನವರು ಹೇಳುತ್ತಲೇ ಇದ್ದಾರೆ. ಇನ್ನೊಂದು ಕಡೆ ರಾಜೀನಾಮೆ ನೀಡ್ತಾರೆ ಅನ್ನೋ ಚರ್ಚೆ ಶುರುವಾಗಿದೆ.

ಜುಲೈ 26ಕ್ಕೆ ಅಥವ ಆಗಸ್ಟ್ ಮೊದಲ ವಾರದಲ್ಲಿ ರಾಜೀನಾಮೆ ನೀಡುವ ಸಾಧ್ಯತೆಯಿದೆ ಎನ್ನಲಾಗ್ತಿದೆ. ಹೀಗಾಗಿಯೇ ದೆಹಲಿಯಿಂದ ಬಂದ ಎರಡು ದಿನಗಳಲ್ಲಿಯೇ ನಿಗಮ, ಮಂಡಳಿಗಳಿಗೆ ಅಧ್ಯಕ್ಷರನ್ನ ನೇಮಕ ಮಾಡಿದ್ದಾರೆ. ತಮ್ಮ ಆಪ್ತರಿಗಾಗಿ ಭೋಜನಕೂಟ ನಡೆಸಿದ್ದಾರೆ. ಅಲ್ದೇ, ಆಡಿಯೋ ಸಂಘರ್ಷ, ಹಿರಿಯ ಸಚಿವರ ವಾಗ್ದಾಳಿ ನಡೆಯುತ್ತಲೇ ಇದೆ.

ಇನ್ನೊಂದ್ಕಡೆ ಪಕ್ಷಬೇಧ ಲಿಂಗಾಯತ ನಾಯಕರು ಜಾತಿಗೆ ಜೋತುಬಿದ್ದು ಯಡಿಯೂರಪ್ಪನವರ ಬೆಂಬಲಕ್ಕೆ ಬಹಿರಂಗವಾಗಿ ನಿಂತಿದ್ದಾರೆ. ಹೀಗಾಗಿ ಯಡಿಯೂರಪ್ಪ ರಾಜೀನಾಮೆ ಪಡೆದ್ರೆ ಲಿಂಗಾಯತ, ಪಂಚಪಸಾಲಿ ಸಮುದಾಯದವರು ಅವಕೃಪೆಗೆ ಒಳಗಾಗಬೇಕಾಗುತ್ತೆ ಎಂದು ಹೇಳ್ತಿದ್ದಾರೆ. ಹೀಗಾಗಿ ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ದಟ್ಟವಾಗಿವೆ ಅನ್ನೋ ಮಾತುಗಳು ಕೇಳಿ ಬರ್ತಿವೆ.




Leave a Reply

Your email address will not be published. Required fields are marked *

error: Content is protected !!