ಮಲಗಿದ್ದ ಕಂದನನ್ನ ಎಳೆದೊಯ್ದು ತಿಂದ ಚಿರತೆ

337

ರಾಮನಗರ: ಇದು ನಿಜಕ್ಕೂ ಅತ್ಯಂತ ನೋವಿನ ಸಂಗತಿ. ಮನೆಯಲ್ಲಿ ಮಲಗಿದ್ದ 3 ವರ್ಷದ ಮಗುವನ್ನ ಶುಕ್ರವಾರ ರಾತ್ರಿ ಚಿರತೆಯೊಂದು ಎಳೆದೊಯ್ದು ತಿಂದ ಘಟನೆ ರಾಮನಗರದಲ್ಲಿ ನಡೆದಿದೆ. 3 ವರ್ಷದ ಹೇಮಂತ ಚಿರತೆ ದಾಳಿಗೆ ಬಲಿಯಾಗಿದ್ದಾನೆ.

ತುಂಬಾ ಶಕೆಯೆಂದು ಹೊರಗೆ ಮಲಗಿದ್ದಾಗ ಮಾಗಡಿ ತಾಲೂಕಿನ ಕದಿರಯ್ಯನಪಾಳ್ಯದಲ್ಲಿ, ಚಂದ್ರಪ್ಪ ಹಾಗೂ ಮಂಗಳಗೌರಮ್ಮ ದಂಪತಿಯ ಮಗು ಶುಕ್ರವಾರ ರಾತ್ರಿ ಚಿರತೆ ದಾಳಿಗೆ ಬಲಿಯಾಗಿದೆ. ಮನೆಯವರು ಗಾಢ ನಿದ್ದೆಯಲ್ಲಿದ್ದ ಕಾರಣ, ಮದ್ದು ಮಗನನ್ನ ಕಳೆದುಕೊಂಡಂತಾಗಿದೆ.

ಮಂಗಳಗೌರಮ್ಮ ತವರು ಮನೆ ಕದಿರಯ್ಯನಪಾಳ್ಯವಾಗಿದ್ದು, ವಾರದ ಹಿಂದೆಯಷ್ಟೇ ಇಲ್ಲಿಗೆ ಬಂದಿದ್ರು. ರಾತ್ರಿ ಎಚ್ಚರವಾದಾಗ ಮಗುವಿನ ಹುಡುಕಾಟ ನಡೆಸಿದಾಗ ಮನೆಯಿಂದ ಸುಮಾರು 60 ಮೀಟರ್ ದೂರದಲ್ಲಿ ಶವ ಪತ್ತೆಯಾಗಿದೆ. ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಮಾಹಿತಿ ಪಡೆದಿದ್ದಾರೆ.

ಸಾಂದರ್ಭಿಕ ಚಿತ್ರ:




Leave a Reply

Your email address will not be published. Required fields are marked *

error: Content is protected !!