ಬೆಂಗಳೂರಿಗೆ ಬಿಎಸ್ವೈ ವಾಪಸ್

294

ಪ್ರಜಾಸ್ತ್ರ ಸುದ್ದಿ

ನವದೆಹಲಿ: ರಾಜ್ಯ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯೋ ಅಥವ ಪುನರ್ ರಚನೆಯೋ ಅನ್ನೋ ಕುತೂಹಲವಿದೆ. ಯಾಕಂದ್ರೆ, ಸಿಎಂ ಬಿ.ಎಸ್ ಯಡಿಯೂರಪ್ಪನವರು, ಮಳೆಗಾಲದ ಅಧಿವೇಶನ ಶುರುವಾಗುವ ಮೊದ್ಲೇ ಕೇಂದ್ರ ನಾಯಕರನ್ನ ಇಂದು ಭೇಟಿಯಾಗಿ ಮಾತುಕತೆ ನಡೆಸಿ, ಬೆಂಗಳೂರಿಗೆ ವಾಪಸ್ ಆಗ್ತಿದ್ದಾರೆ.

ಪ್ರಧಾನಿ ಮೋದಿ, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಕೇಂದ್ರ ಸಚಿವರು ಸೇರಿದಂತೆ ಕೆಲವು ಮುಖಂಡರೊಂದಿಗೆ ಸಿಂ ಬಿಎಸ್ವೈ ಮಾತುಕತೆ ನಡೆಸಿ, ಸಚಿವ ಸ್ಥಾನ ವಂಚಿತ ಶಾಸಕರ ಮನವೊಲಿಕೆಗೆ ಏನೆಲ್ಲ ಮಾಡಬೇಕು ಅನ್ನೋದರ ಜೊತೆಗೆ ಬಿಎಸ್ವೈ ನಾಯಕತ್ವವನ್ನೇ ಬದಲಾವಣೆ ಮಾಡಲಾಗುತ್ತೆ ಅನ್ನೋ ಚರ್ಚೆ ಶುರುವಾಗಿದೆ. ಆದ್ರೆ, ಇದೆಲ್ಲ ಗಾಳಿ ಸುದ್ದಿ, ಮುಂದಿನ ಎರಡೂವರೆ ವರ್ಷ ಬಿಎಸ್ವೈ ಸಿಎಂ ಆಗಿರಲಿದ್ದಾರೆ ಎಂದು ತಿಳಿದು ಬಂದಿದೆ.




Leave a Reply

Your email address will not be published. Required fields are marked *

error: Content is protected !!