ಪ್ರಜಾಸ್ತ್ರ ಸುದ್ದಿ
ವಿಜಯಪುರ: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಅಸಾಧ್ಯ. ಬರಗಾಲ, ಪ್ರವಾಹ, ಕೋವಿಡ್ ಸಂಕಷ್ಟದ ನಡುವೆಯೂ ಕ್ರಿಯಾಶೀಲತೆಯಿಂದ ಅದನ್ನು ನಿಭಾಯಿಸ್ತಿದ್ದಾರೆ. ಇಂತಹ ಸಮರ್ಥ ನಾಯಕನನ್ನು ಬದಲಾಯಿಸಲು ಸಾಧ್ಯವಿಲ್ಲವೆಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ರು.
ಬುಧವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತ್ನಾಡಿದ ಅವರು, ಮುಖ್ಯಮಂತ್ರಿ ಬದಲಾವಣೆ ಊಹಾಪೋಹ. ಮುಂದಿನ ಚುನಾವಣೆ ಸಹ ಯಡಿಯೂರಪ್ಪ ನೇತೃತ್ವದಲ್ಲಿ ಎದುರಿಸಲಿದ್ದೇವೆ. ಯಡಿಯೂರಪ್ಪ ನೇತೃತ್ವದಲ್ಲಿ ಎಲ್ಲ ಸಚಿವರು ತಮ್ಮ ಖಾತೆಯನ್ನ ಸಮರ್ಥವಾಗಿ ನಿರ್ವಹಿಸ್ತಿದ್ದಾರೆ. ಆದ್ರೂ, ಪಕ್ಷದ ಶಾಸಕರಲ್ಲೇ ಒಂದಿಬ್ಬರು ಸಿಎಂ ಬಗ್ಗೆ ಅನಿಸಿದ್ದನ್ನು ಹೇಳುತ್ತಲೇ ಇರ್ತಾರೆ. ಇದ್ರಿಂದ ಸರ್ಕಾರ, ಪಕ್ಷ, ರಾಜ್ಯದ ಜನತೆಗೂ ಬೇಸರವಾಗುತ್ತೆ ಎಂದು ಹೇಳುವ ಮೂಲಕ, ವಿರೋಧಿ ಬಣಕ್ಕೆ ಚಾಟಿ ಬೀಸಿದ್ರು.