ಮುಂಬೈ: ಮಹಾ ವಿಕಾಸ್ ಅಘಾಡಿ ಸರ್ಕಾರ ಇಂದು ಬಹುಮತ ಸಾಬೀತು ಪಡಿಸಲಿದೆ. ರಾಜ್ಯಪಾಲ ಕೊಶ್ಯಾರಿಯಾ ಅವರು ಮಧ್ಯಾಹ್ನ 3ಗಂಟೆಯೊಳಗೆ ಬಹುಮತ ಸಾಬೀತು ಪಡೆಸಲು ಸೂಚಿಸಿದ್ದಾರೆ.
ಶಿವಸೇನೆ ಮುಖ್ಯಸ್ಥ, ಸಿಎಂ ಉದ್ಧವ್ ಠಾಕ್ರೆ ನೇತೃತ್ವದ ಮೈತ್ರಿ ಸರ್ಕಾರ ಇಂದು ವಿಶ್ವಾಸ ಮತಯಾಚನೆ ಮಾಡಲಿದೆ. ಈ ವೇಳೆ ಹಂಗಾಮಿ ಸ್ಪೀಕರ್ ಆಗಿ ಎನ್ ಸಿಪಿ ನಾಯಕ ದಿಲೀಪ ವಾಲ್ಸೆ ಪಾಟೀಲ ಕಾರ್ಯನಿರ್ವಹಿಸಲಿದ್ದಾರೆ. ಬಹುಮತ ಸಾಬೀತು ಪ್ರಿಕ್ರಿಯೆಯಲ್ಲಿ ಸಿಎಂ ಉದ್ಧವ್ ಠಾಕ್ರೆ ಗೆಲ್ಲುವುದು ನಿಶ್ಚಿತ. ಸಂವಿಧಾನತ್ಮಕ ಪ್ರಕ್ರಿಯೆ ಇರುವುದ್ರಿಂದ ವಿಶ್ವಾಸಮತ ಯಾಚನೆ ನಡೆಸಬೇಕಿದೆ.