ಪ್ರಜಾಸ್ತ್ರ ಸುದ್ದಿ
ಲಖನೌ: ಸರ್ಕಾರಿ ಕೆಲಸ ಮಾಡಲು ನೀನು ಯೋಗ್ಯನಲ್ಲವೆಂದು ಅವಮಾನಿಸಿ ಬಲವಂತದಿಂದ ಐಪಿಎಸ್ ಅಧಿಕಾರಿಯಿಂದ ನಿವೃತ್ತಿ ಪಡೆದಿದ್ದ ಸಿಎಂ ಯೋಗಿ ಆದಿತ್ಯನಾಥಗೆ ಇದೀಗ ತಲೆ ನೋವು ಶುರುವಾಗಿದೆ.
2022ರಲ್ಲಿ ಯೋಗಿ ವಿರುದ್ಧ ಸ್ಪರ್ಧಿಸುವುದಾಗಿ ನಿವೃತ್ತ ಐಪಿಎಸ್ ಅಧಿಕಾರಿ ಅಮಿತಾಬ್ ಠಾಕೂರ್ ಹೇಳಿದ್ದಾರೆ. ಈಗಾಗ್ಲೇ ಅಧಿಕಾರ್ ಸೇನಾ ಸಂಘಟನೆ ಸ್ಥಾಪಿಸಿದ್ದು, ಶೀಘ್ರದಲ್ಲಿ ಪಕ್ಷ ಘೋಷಣೆ ಮಾಡುವುದಾಗಿ ಹೇಳಿದ್ದಾರೆ. ಸಿಎಂ ಯೋಗಿ ವಿರುದ್ಧ ಅಮಿತಾಬ್ ಪತ್ನಿ ನೂತನ್ ಸಹ ಕಿಡಿ ಕಾರಿದ್ದು, ಮುಂದಿನ ಚುನಾವಣೆಯಲ್ಲಿ ಯೋಗಿ ವಿರುದ್ಧ ಸ್ಪರ್ಧಿಸುವುದಾಗಿ ಹೇಳಿದ್ದಾರೆ.