ಯೋಧನಿಗೆ ಅವಮಾನವಾದ್ರೂ ಕ್ಯಾರೆ ಅನ್ನದ ಸರ್ಕಾರ

400

ಬೆಳಗಾವಿ: ಯೋಧನಿಗೆ ಅವಮಾನ ಮಾಡಿರುವ ವಿಚಾರ ಇಷ್ಟೊಂದು ಚರ್ಚೆಯಾಗ್ತಿದ್ರೂ, ರಾಜ್ಯ ಬಿಜೆಪಿ ಸರ್ಕಾರದ ಯಾವುದೇ ವ್ಯಕ್ತಿಗಳು ಬಾಯಿ ಬಿಡದೆ ಇರೋದು ನಿಜಕ್ಕೂ ದುರಂತ. ಬಿಜೆಪಿ ನಾಯಕರು ಬಾಯಿ ಬಟ್ರೆ ದೇಶ, ಯೋಧರು ಅಂತಾ ಗಂಟಲು ಅರಚಿಕೊಳ್ತಾರೆ. ಆದ್ರೆ, ಮಾಸ್ಕ್ ಧರಸಿಲ್ಲ ಅನ್ನೋ ಕಾರಣಕ್ಕೆ, ಸಿಆರ್ ಪಿಎಫ್ ಯೋಧನೆ ಬಂಧಿಸಿ ಅವಮಾನ ಮಾಡಿದ್ರೂ ಕ್ಯಾರೆ ಅಂತಿಲ್ಲ.

ಕೋಬ್ರಾ ಕಮಾಂಡ್ ಪಡೆಯಲ್ಲಿರುವ ಸಚಿನ ಸುನಿಲ ಸಾವಂತ ಅನ್ನೋ ಯೋಧ, ಏಪ್ರಿಲ್ 11ರ ತನಕ ರಜೆ ಮೇಲೆ ಊರಿಗೆ ಬಂದಿದ್ರು. ಹೀಗೆ ಬಂದವರು ಏಪ್ರಿಲ್ 23ರಂದು ಹೊರಗೆ ಬಂದಾಗ ಮಾಸ್ಕ್ ಧರಿಸಿರ್ಲಿಲ್ಲ. ಹೀಗಾಗಿ ಬೆಳಗಾವಿ ಪೊಲೀಸ್ರು ಬಂಧಿಸಿ, ಕೈ ಕಾಲಿಗೆ ಕೋಳ ಹಾಕಿದ್ದಾರೆ. ಕಾರಣ, ಯೋಧ ಸಚಿನ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಹೇಳಿದ್ದಾರೆ.

ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮಂಗಳವಾರ ಜಾಮೀನು ಅರ್ಜಿ ವಿಚಾರಣೆ ಬರಲಿದ್ದು, ನಂತರ ಸೂಕ್ತ ತನಿಖೆ ನಡೆಸುವುದಾಘಿ ಸಿಆರ್ ಪಿಎಫ್ ವಕ್ತಾರ ದಿನಕರ ಹೇಳಿದ್ದಾರೆ. ಇನ್ನು ಕಮಾಂಡೋ ಘಟಕ 207, ಕೋಬ್ರಾ ನಕ್ಸಲ್ ನಿಗ್ರಹ ಚಟುವಟಿಕೆಯಲ್ಲಿ ಸಚಿನ ಕೆಲಸ ಮಾಡಿದ್ರು.




Leave a Reply

Your email address will not be published. Required fields are marked *

error: Content is protected !!