ಮಂಡ್ಯ: ತೆಂಗು ಬೆಳೆ ಮಾರಾಟಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡುವಂತೆ, ತೋಟಗಾರಿಕೆ ಸಚಿವ ಡಾ.ನಾರಾಯಣಗೌಡ ಅವರಿಗೆ ಮನವಿ ಸಲ್ಲಿಸಲಾಯ್ತು. ರೈತ ಮುಖಂಡ ಕೆ.ಆರ್ ಜಯರಾಂ ಸಚಿವರಿಗೆ ಮನವಿ ಸಲ್ಲಿಸಿದ್ರು.
ಕೋಕನೆಟ್ ಪೌಡರ್, ಎಳನೀರು ಜ್ಯೂಸ್, ವೆನೀಗರ್ ಸೇರಿದಂತೆ ತೆಂಗು ಉಪ ಉತ್ಪನ್ನಗಳ ಘಟಕಗಳನ್ನ ಸ್ಥಾಪಿಸಿ ರೈತರಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ಜಯರಾಂ ಸಚಿವರಲ್ಲಿ ಮನವಿ ಮಾಡಿದ್ರು.
ಈ ಸಂದರ್ಭದಲ್ಲಿ ಮೂಡಾ ಅಧ್ಯಕ್ಷ ಕೆ.ಶ್ರೀನಿವಾಸ, ಜಿಲ್ಲಾ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಎಸ್.ಅಂಬರೀಶ, ಮುಖಂಡರಾದ ಅಘಲಯ ಮಂಜುನಾಥ, ಕೆ.ಎಸ್.ರಾಮೇಗೌಡ, ದಯಾನಂದ, ಕಿಕ್ಕೇರಿ ಕುಮಾರ, ಕೆ.ವಿನೋದಕುಮಾರ, ಬಸವರಾಜು ಮತ್ತಿತರರು ಉಪಸ್ಥಿತರಿದ್ದರು.