ನವದೆಹಲಿ: ಡೆಡ್ಲಿ ಕರೋನಾದ ಆರ್ಭಟ ದಿನದಿಂದ ದಿನಕ್ಕೆ ದೇಶದಲ್ಲಿಯೂ ಹೆಚ್ಚಾಗ್ತಿದೆ. ಕಳೆದ 24 ಗಂಟೆಯಲ್ಲಿ ದೇಶದಾದ್ಯಂತ 31 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ 331ಕ್ಕೆ ಏರಿಕೆಯಾಗಿದೆ. 9,205 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.
ರಾಷ್ಟ್ರರಾಜಧಾನಿಯಲ್ಲಿ ನಿನ್ನೆ ಒಂದೇ ದಿನದಲ್ಲಿ 85 ಕೇಸ್ ಪತ್ತೆಯಾಗಿವೆ. ಅಲ್ಲಿ 1,154ಕ್ಕೆ ಏರಿಕೆಯಾಗಿದೆ. ಕರ್ನಾಟಕದಲ್ಲಿ ನಿನ್ನೆ 11 ಜನರಲ್ಲಿ ಸೋಂಕು ಪತ್ತೆಯಾಗಿದೆ. ಅದರಲ್ಲಿ 6 ಕೇಸ್ ವಿಜಯಪುರ ಒಂದರಲ್ಲಿಯೇ. ಇದ್ರಿಂದಾಗಿ ಸೋಂಕಿತರ ಸಂಖ್ಯೆ 226 ಆಗಿದೆ.
ಸೋಂಕಿತರು (ದೇಶದಾದ್ಯಂತ) | ಸಾವನ್ನಪ್ಪಿರುವುದು | ಗುಣಮುಖ |
9,205 | 331 | 1,080 |
ಮಹಾರಾಷ್ಟ್ರದಲ್ಲಿ 1,982ಕ್ಕೆ ಏರಿಕೆಯಾಗಿದೆ. ತಮಿಳುನಾಡಿನಲ್ಲಿ 1,075 ಆಗಿದೆ. ರಾಜಸ್ಥಾನ 804, ಮಧ್ಯಪ್ರದೇಶ 532 ಹಾಗೂ ಗುಜರಾತ್ ನಲ್ಲಿ 516 ಕೇಸ್ ಪತ್ತೆಯಾಗಿವೆ. 1,080 ಜನ ಗುಣಮುಖರಾಗಿದ್ದಾರೆ.